“ಹೊಸ ವರ್ಷದ ಮೊದಲನೇ ಸೋಮವಾರ ದಂದು ಮರಿಕೊಟ್ರೇಶ್ವರ ಕಾರ್ತಿಕೋತ್ಸವ”.
ಕೊಟ್ಟೂರು ಜನೇವರಿ.1

ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠ ಕಾರ್ತೀಕೋತ್ಸವದ ನಂತರ ಮೊದಲನೇ ಸೋಮವಾರ ದಂದು ಕಾರ್ತಿಕೋತ್ಸವಕ್ಕೆ ಮರಿಕೊಟ್ರೇಶ್ವರ ದೇವಸ್ಥಾನ ಹೂವಿನ ಅಲಂಕಾರ ಮೆರುಗು ಮೂಡಿಸಿತು.ಪ್ರತಿ ಕಾರ್ತೀಕ ಮಾಸದಲ್ಲಿ ಮರಿ ಕೊಟ್ಟೂರೇಶ್ವರ ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸುವ ಸೇವೆಯನ್ನು ಮುಂದುವರೆಸಿ ಕೊಂಡು ಬಂದಿರುವ ಕಾರು ಚಾಲಕರು ಮತ್ತು ಆಟೋ ಚಾಲಕರ ಸಂಘದ ಭಕ್ತರು ಹೂಗಳಿಂದ ಶೃಂಗಾರ ಗೊಂಡ ಶ್ರೀಸ್ವಾಮಿಯ ದೇವಸ್ಥಾನವನ್ನು ಸೋಮವಾರ ದಿನವಿಡೀ ಭಕ್ತರು ಕಣ್ತುಂಬಿ ಕೊಂಡು ಶ್ರೀಸ್ವಾಮಿಯ ದರ್ಶನಾರ್ಶಿವಾದ ಪಡೆದು ಕೊಂಡರಲ್ಲದೆ ಬಹುತೇಕರು ತಮ್ಮ ಮೊಬೈಲ್ ಕ್ಯಾಮರಗಳಿಂದ ಶೃಂಗಾರ ಗೊಂಡ ದೇವಸ್ಥಾನವನ್ನು ಸೆರೆ ಹಿಡಿದರು.

ಹೊಸ ವರ್ಷದ ಮೊದಲನೇ ಸೋಮವಾರ ಮರಿಕೊಟ್ಟೂರೇಶ್ವರ ಕಾರ್ತಿಕೋತ್ಸವ ದೀಪ ಹಚ್ಚುವ ಕಾರ್ಯಕ್ರಮ ಸಂಜೆ 6 ಗಂಟೆಗೆ ವಿಜೃಂಭಣೆಯಿಂದ ನಡೆಯುತ್ತಿದೆ. ಎಂದು ಕಾರು ಚಾಲಕರು, ಆಟೋ ಚಾಲಕರು ಹಾಗೂ ದೇವಸ್ಥಾನ ಅರ್ಚಕರು ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು