ಕೂಡ್ಲಿಗಿಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ರೋಡ್ ಶೋ.

ಕೂಡ್ಲಿಗಿ ಮೇ.06

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಲೋಕಸಭಾ ಚುನಾವಣೆ ಅಭ್ಯರ್ಥಿಯಾದ ಮಾನ್ಯ ಬಿ. ಶ್ರೀರಾಮುಲು ಅವರು ಜಿಲ್ಲಾಧ್ಯಕ್ಷರಾದ ಶ್ರೀ ಚನ್ನಬಸವನಗೌಡ ಪಾಟೀಲ್ ರವರು ಎಸ್ ಟಿ ಮೋರ್ಚಾ ರಾಜ್ಯದ್ಯಕ್ಷರಾದ ಶ್ರೀ ಬಂಗಾರು ಹನುಮಂತ ರವರು ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ ಲೋಕಸಭಾ ಚುನಾವಣಾ ಮತಯಾಚನೆ ಪ್ರಚಾರ ಮಾಡಿದರು. ಕೂಡ್ಲಿಗಿ ಪಟ್ಟಣದ ಹೊಸಪೇಟೆ ರಸ್ತೆಯ ಶ್ರೀರಾಮೇಶ್ವರ ದೇವಸ್ಥಾನದದಲ್ಲಿ ಪೂಜೆ ಮಾಡಿ ಪ್ರಚಾರವನ್ನು ಪ್ರಾರಂಭ ಮಾಡಲಾಯಿತು. ಕೂಡ್ಲಿಗಿ ತಾಲೂಕಾ ಮತ್ತು ಪಟ್ಟಣದಿಂದ ಜನಸಾಗರವೇ ಹರಿದು ಬಂದಿತ್ತು. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮಾತನಾಡಿ , ಭಾರತ ದೇಶ ವಿಶ್ವಗುರು ಆಗಲು ನರೇಂದ್ರ ಮೋದಿಯವರು ಪ್ರಧಾನಿಯ ಮಂತ್ರಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವುದು ಖಚಿತ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಆಡಳಿತ ನಡೆಸಿ ಇಡೀ ಪ್ರಪಂಚದಲ್ಲಿ ಕೂಡ ಐದನೇ ಸ್ಥಾನದ ಆರ್ಥಿಕ ದೊಡ್ಡ ಶಕ್ತಿಯಾಗಿ ಭಾರತ ದೇಶ ಬೆಳೆದು ನಿಂತಿದೆ. ಆಂಧ್ರ ಪ್ರದೇಶದ ಸುರೇಶ್ ರೆಡ್ಡಿ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಮುಂದೆ ಮೋದಿ ಸರ್ಕಾರದ ಸಾಧನೆಗಳು ಹೇಳುತ್ತಾ ರಾಮುಲು ಅವರಿಗೆ ವೋಟು ನೀಡುವುದರ ಮುಖಾಂತರ ಈ ದೇಶದ ಅಭಿವೃದ್ಧಿಗೆ ತಾವೆಲ್ಲರೂ ಕೂಡ ಶ್ರಮಿಸಬೇಕಾಗಿ ಕಳಕಳಿ ಎಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ರಾಜ್ಯದ ಎಸ್ ಟಿ ಮೋರ್ಚ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು ಆಂಧ್ರ ಪ್ರದೇಶದ ಸುರೇಶ್ ರೆಡ್ಡಿ ತಾಲೂಕು ಮಂಡಲದ ಅಧ್ಯಕ್ಷರಾದ ಕೆ ನಾಗರಾಜ್. ಬಿ ಭೀಮೇಶ್. ಎಸ್ ದುರ್ಗೇಶ್. ಗುಳಿಗೆ ವೀರೇಂದ್ರ. ಗುಂಡುಮುಣುಗು ಪ್ರಕಾಶ್. ಸಚಿನ್ ಕುಮಾರ್. ಕೆ ಅಜಯ್ ಕುಮಾರ್ ಮರಬದ ಅಜಯ್. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹುರುಳಿ ಹಾಳು ರೇವಣ್ಣ. ಮಾರೇಶ್ ಸುಲದಹಳ್ಳಿ. ನಿರಂಜನ್ ಕುಮಾರ್ ಎ. ಹೊಸಹಳ್ಳಿ ಈರಣ್ಣ. ರಜಿನಿ. ಗಂಗಮ್ಮ. ಅನೇಕ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button