ಬಕ್ರೀದ್ ಶಾಂತಿ ಸಭೆ ಸೌಹಾರ್ದತೆಯಿಂದ ಹಬ್ಬ ಆಚರಿಸಿ — ಸಿ.ಪಿ. ಐ ವಸಂತ ಅಸೊದೆ ಕರೆ.
ಕೂಡ್ಲಿಗಿ ಜೂನ್.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಕ್ರೀದ್ ಹಬ್ಬವನ್ನು ಸಕಲರು ಸೌಹಾರ್ದತೆಯಿಂದ ಶಾಂತಿಯುತವಾಗಿ ಆಚರಿಸಬೇಕಿದೆ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿ ಮಾಡಲಾಗುತ್ತದೆ ಎಂದು ಸಿಪಿಐ ವಸಂತ ಅಸೊದೆ ಅವರು ಜೂನ್ 23ರಂದು ಠಾಣೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿದರು, ಬೈಕ್ ಗಳನ್ನು ಮಕ್ಕಳಿಗೆ ಪೋಷಕರು ಕೊಡಬಾರದು. ವಾಹನಗಳನ್ನು ಚಲಾಯಿಸುವಾಗ ಸರ್ವರೂ ಚಾಲನೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ, ಬಕ್ರೀದ್ ಹಬ್ಬದಂದು ಪ್ರಾರ್ಥನಾ ಮಂದಿರ ಸೇರಿದಂತೆ ವೃತ್ತಗಳಲ್ಲಿ ಪೊಲೀಸ್ ರನ್ನು ನಿಯೋಜಿಸಲಾಗಿರುತ್ತೆ. ಭಾರೀ ವಾಹನಗಳು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ, ಸುಗಮ ಸಂಚಾರಕ್ಕೆ ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹಬ್ಬ ಹರ್ಷದ ಸಂಕೇತ ಕಾರಣ ಎಲ್ಲಾ ಪಂಗಡದ ಜಾತಿಯವರೆಲ್ಲರೂ ಸೇರಿ, ಸೌಹಾರ್ಧತೆಯಿಂದ ಶಾಂತಿಯುತವಾಗಿ ಸಂತಸದಿಂದ ಬ್ರಕ್ರೀದ್ ಹಬ್ಬ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು, ಕೈಗೊಂಡಿರುತ್ತದೆ ಜೊತೆಗೆ ಸಾರ್ವಜನಿಕರ ಸರ್ವ ಸಮುದಾಯಗಳ ಸಹಕಾರ ಅತ್ಯಗತ್ಯ ಎಂದರು. ಮೊಬೈಲ್ ಅಥವಾ ಬಿತ್ತಿಪತ್ರಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ, ಯಾವುದೆ ವ್ಯಕ್ತಿಗಳ ಹಾಗೂ ಯಾವುದೇ ಧರ್ಮ ಜಾತಿ ಸಮಾಜದ ಘನತೆಗೆ ಧಕ್ಕೆ ಬರುವಂತಹ ಸಂದೇಶಗಳನ್ನು ರವಾನಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಚಟುವಟಿಕೆಗಳಲ್ಲಿ ನಿರತರಾಗಿರುವ ಶಂಕಿತರ ಮೇಲೆ ಇಲಾಖೆ ತೀವ್ರ ನಿಗಾ ವಹಿಸಿರುತ್ತದೆ, ಅದು ಅಕ್ಷಮ್ಯ ಸೈಬರ್ ಅಪರಾಧವಾಗಿದ್ದು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕಾರಣ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಚಲನ ವಲನಗಳ ಮೇಲೆ ನಿಗಾ ಇಡಬೇಕಿದೆ, ಅವರು ಕಳುಹಿಸುವ ಸಂದೇಶಗಳ ಬಗ್ಗೆ ವಿಚಾರಿಸಬೇಕಿದೆ ಎಂದು ಸಲಹೆ ನೀಡಿದರು. ಪಪಂ ಸದಸ್ಯ ಹಾಗೂ ವಾಲ್ಮೀಕಿ ಸಮಾಜದ ಮುಖಂಡರಾದ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ, ಹರ್ಷ ತುಂಬಿರುವ ಸಂದರ್ಭದಲ್ಲಿ ಮಕ್ಕಳಿಂದಾಗಬಹುದಾದ ಅಪಘಾತ ಹಾಗೂ ಅವಘಡಗಳ ಕುರಿತು ಅವರು ಸಭೆಗೆ ತಿಳಿಸಿದರು.

ಹರ್ಷ ಸಂತಸದ ಸಮಯದಲ್ಲಿ ಮಕ್ಕಳು ಮಾಡುವ ಕೆಲವು, ಲೋಪ ದೋಷಗಳಿಂದಾಗಿ ಸೂತಕದ ವಾತಾವರಣ ನಿರ್ಮಾಣವಾಗದಿರಲಿ. ಕಾರಣ ಹಬ್ಬವನ್ನು ಸರ್ವರೂ ಸಹಬಾಳ್ವೆಯಿಂದ ಶಾಂತಿ ಸೌಹಾರ್ದತೆಯಿಂದ, ಹಬ್ಬವನ್ನು ಆಚರಿಸಲು ಮಕ್ಕಳು ಮಹಿಳೆಯರು ಹಿರಿಯರು ಸರ್ವರೂ ಕೈಜೋಡಿಸೋಣ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಮಾತನಾಡಿ, ಕೂಡ್ಲಿಗಿ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ , ಕಾರಣ ಸರ್ವರೂ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕಿದೆ. ಸರ್ವರೂ ಶಾಂತಿ ಯುತವಾಗಿ ಅರ್ಥಪೂರ್ಣವಾಗಿ ಹರ್ಷದಿಂದ ಸಂತಸದಿಂದ ಬಕ್ರೀದ್ ಹಬ್ಬ ಆಚರಿಸಿ ನಾಗರಿಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದೆ ಎಂದರು.ಸಭೆಯಲ್ಲಿ ಮುಸ್ಲೀಂ ಸಮಾಜದ ಮುಖಂಡರಾದ ಮಾದಳ್ಳಿ ನಜೀರ್ ಸಾಬ್, ಮೌಲಾನಾ,ಸ್ನೇಹಿತರ ಬಳಗದ ಅಬ್ದುಲ್ ರಹೆಮಾನ್, ಪಪಂ ಸದಸ್ಯ ಶುಕೂರ್ ಅಹಮ್ಮದ್, ದಲಿತ ಮುಖಂಡ ಎಸ್.ದುರುಗೇಶ,ಗುಡೇಕೋಟೆ ಜಿ.ಎಸ್.ನಾಗರಾಜ ಮುಂತಾದವರು ಮಾತನಾಡಿದರು. ಪಟ್ಟಣದ ಅನೇಕ ಮುಸ್ಲೀಂ ಮುಖಂಡರು, ದಲಿತ ಮುಖಂಡರು, ವಾಲ್ಮೀಕಿ ಸಮಾಜ ಸೇರಿದಂತೆ ವಿವಿದ ಸಮಾಜದ ಮುಖಂಡರು, ವಿವಿದ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು, ವಿವಿದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಅಧಿಕಾರಿವರ್ಗ , ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಹಾಜರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ