ಅಲಬೂರು ಗ್ರಾಮದಲ್ಲಿ ಪರವಾನಿಗೆ ಪಡೆದವರಿಂದ ಅಕ್ರಮ ಮರಳು ಎತ್ತುವಳಿ ಆರೋಪ…..
ಕೊಟ್ಟೂರು ಅಕ್ಟೋಬರ್.4

ಕೊಟ್ಟೂರು ತಾಲೂಕಿನ ಅಲಬೂರು ಗ್ರಾಮದಲ್ಲಿ ಸರ್ಕಾರದ ನಿರ್ದೇಶನದಂತೆ ಪರವಾನಿಗೆ ಪಡೆದು ಮರಳು ಗಣಿಗಾರಿಕೆ ನಡೆಯುತ್ತಿದ್ದು, ಪಕ್ಕದಲ್ಲೇ ಇರುವ ಪರಂಪೋಕು ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಆ ಜಮೀನುಗಳಿಂದ ಮರಳು ಎತ್ತುವಳಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ಸರ್ಕಾರದ ಪರಂಪೋಕು ಜಾಗಗಳಿಂದ ಮರಳು ಎತ್ತುವಳಿ ಮಾಡುತ್ತಿದ್ದರೂ ಸಹ ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿಯೇ ಎಂದು ಗ್ರಾಮಸ್ಥರು ಆರೋಪಿಸಿದರು. ತಮಗೆ ಪರವಾನಿಗೆ ನೀಡಿರುವ ಜಾಗದಲ್ಲಿ ಮಾತ್ರ ಮರಳು ಎತ್ತುವಳಿ ಮಾಡಲು ನಿಯಮಗಳಿದ್ದರೂ ಸಹ ಈ ರೀತಿ ಅಕ್ರಮವಾಗಿ ಮರಳು ಎತ್ತುವಳಿ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೇ ಮರಳು ಎತ್ತುವಳಿ ಮಾಡಲು ಇಂತಿಷ್ಟೇ ಆಳ ಮರಳು ತೆಗೆಯಬೇಕೆಂಬ ನಿಯಮಗಳಿದ್ದರೂ ಸಹ ಅದನ್ಯಾವುದನ್ನೂ ಲೆಕ್ಕಿಸದೇ ಪರವಾನಿಗೆಯ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮರಳು ಎತ್ತುವಳಿ ಮಾಡುತ್ತಿರುವುದರಿಂದ ಅಂತರ್ಜಲ ಕುಸಿತ ಕಾಣುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದರೂ ಸಹ ಎಗ್ಗಿಲ್ಲದೇ ಯಾರಿಗೂ ಕೇರ್ ಮಾಡದೇ ರಾತ್ರಿ ಹೊತ್ತಿನಲ್ಲೇ ಈ ರೀತಿ ಅಕ್ರಮ ಎಸಗುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಾಲ್ಲೂಕು ಆಡಳಿತ ಈ ಬಗ್ಗೆ ಕ್ರಮ ವಹಿಸಬೇಕೆಂದು ಗ್ರಾಮಸ್ಥರಾದ ಪ್ರಕಾಶ್ ಪತ್ರಿಕೆಗೆ ತಿಳಿಸಿದ್ದಾರೆ.

ಕೊಟ್ -1ಮರಳು ಗಣಿಗಾರಿಕೆಯ ಪರವಾನಿಗೆ ಯಲ್ಲಿ ಮರಳು ಎತ್ತುವಳಿ ಮಾಡಲು ಇಂತಿಷ್ಟೇ ಆಳ ಮರಳು ತೆಗೆಯಬೇಕೆಂಬ ನಿಯಮಗಳಿದ್ದರೂನಿಯಮ ಉಲ್ಲಂಘನೆ.? ಪಕ್ಕದಲ್ಲೇ ಇರುವ ಪರಂಪೋಕು ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ.! ಎಂದು ಕೊಟ್ರೇಶ್ ಅಲಬೂರು, ಆರೋಪಿಸಿದರುಕೋಟ್-2ಅಲಬೂರು ಗ್ರಾಮದಲ್ಲಿ ಪರವಾನಿಗೆ ಪಡೆದು ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಅದರಲ್ಲಿ ಒತ್ತುವರಿ ಅಥವಾ ಹೆಚ್ಚುವರಿಯಾಗಿ ಮಾಡಿದ್ದರೆ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಅಮರೇಶ್ ಜಿ ಕೆ, ತಹಶೀಲ್ದಾರ್ .
ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.ಸಿ ಕೊಟ್ಟೂರು