ಗ್ರಾಮ ಆಡಳಿತ ಅಧಿಕಾರಿ ಧರೆಪ್ಪ ಆ, 22 ರೊಳಗೆ ಕರ್ತವ್ಯಕ್ಕೆ ಹಾಜರಾಗಿದಿದ್ದರೆ ಕ್ರಮ.
ಮಸ್ಕಿ ಆ.09

ತಾಲೂಕಿನ ಪಾಮನ ಕಲ್ಲೂರು ಹೋಬಳಿಯ ಪಾಮನ ಕಲ್ಲೂರು ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಧರೆಪ್ಪ ಮಾಳಿ ಇವರು 01/03/2024 ರಿಂದ ಇಂದಿನ ವರೆಗೂ ಅನಧಿಕೃತ ಗೈರು ಹಾಜರಾಗಿದ್ದು, ತಾಲೂಕ ದಂಡಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮಸ್ಕಿ ಇವರ ಮುಖೇನ ಮೊದನೇ ನೋಟಿಸನ್ನು ದಿನಾಂಕ-10/04/204 ರಂದು ನೀಡಲಾಗಿದ್ದು, ಎರಡನೇ ನೋಟಿಸ್ನ್ನು 29/06/2024 ರಂದು ಹಾಗೂ ಅಂತಿಮ ನೋಟಿಸ್ನ್ನು ದಿನಾಂಕ-29/07/2024 ನೀಡಲಾಗಿ ಈ ಮೂರು ನೋಟಿಸಗೆ ಉತ್ತರವನ್ನು ನೀಡಿರುವುದಿಲ್ಲ ಮತ್ತು ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಆದ್ದರಿಂದ ದಿನಾಂಕ-22/08/2024 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ತಿಳಿಸುತ್ತಾ ಒಂದು ವೇಳೆ ಸೂಚಿಸಿದ ದಿನಾಂಕದ ಒಳಗಡೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆ.ಸಿ.ಎಸ್.ಆರ್ ನಿಯಮ 1957 ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಾಲೂಕ ದಂಡಾಧಿಕಾರಿ ಮಸ್ಕಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.