ಶಿವಾನಂದ ತೇಲಿ ರವರಿಗೆ ಕನ್ನಡ ರಾಜ್ಯೋತ್ಸವದ – ಪ್ರಶಸ್ತಿ.
ಜಮಖಂಡಿ ನ.26

ಕನ್ನಡ ಪಂಡಿತ್ ಶಿವಾನಂದ ತೇಲಿ ಅವರಿಗೆ ರಾಜ್ಯೋತ್ಸವ ಪುರಸ್ಕಾರ ಜಮಖಂಡಿ ತಾಲೂಕಿನ ತೊದಲಬಾಗಿಯ ಶ್ರೀ ಮಲ್ಲಿಕಾರ್ಜುನ ಪದವಿ ಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ) ದಲ್ಲಿ ಶ್ರೀ ಶಿವಾನಂದ.ಡಿ ತೇಲಿ ಅವರು ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು. ಶಿಕ್ಷಣ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸೇವೆ ಗುರುತಿಸಿ ಇವರಿಗೆ ಕರುನಾಡು ಕಲಾ ಸಿರಿ ಬಳಗ ಬೆಂಗಳೂರು ಇವರು ಕೊಡ ಮಾಡುವ ೨೦೨೪ – ೨೫ ನೇ. ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಪ್ರಯುಕ್ತ ನಮ್ಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಸಪ್ಪ ಹೆಗ್ಗೊಂಡ, ರವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು. ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು ಪ್ರಾಚಾರ್ಯರಾದ ಶ್ರೀ ಆರ್.ಎಚ್ ಚಿನಗುಂಡಿ, ಹಿರಿಯ ಉಪನ್ಯಾಸಕರಾದ ಶ್ರೀ ವಿ.ಆರ್ ಸೊಲ್ಲಾಪುರ, ದೈಹಿಕ ಶಿಕ್ಷಕರಾದ ಶ್ರೀ ಬಿ.ಕೆ ನೇಮಗೌಡ, ಶ್ರೀ ಸಿ.ಎಮ್ ಬರಾಡಿ, ಶ್ರೀ ಬಾಬುಗೌಡ ಪಾಟೀಲ್, ಶ್ರೀ ಎಸ್.ಎ ನಾಯಕ, ಶ್ರೀ ಪಿ.ವಾಯ್ ಕರಿಹೊಳಿ ಶ್ರೀ ಮಹಾದೇವ ಪೂಜಾರಿ, ಮಂಜುನಾಥ ಹಿರೇಮಠ ಶ್ರೀಮತಿ ವಿಜಯಲಕ್ಷ್ಮಿ ಪಂಚಗಾರ್ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ