ದಸರಾ ಹಬ್ಬದ ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ.
ಕೂಡ್ಲಿಗಿ ಅಕ್ಟೋಬರ್.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ತಾಲೂಕು ಸೋಮವಾರ ಬೆಳ್ಳಿಗೆಯಿಂದಲೆ ನಾಡಿನ ಹಿಂದೂಗಳ ದೊಡ್ಡ ಹಬ್ಬ ಎಂದೇ ಪ್ರಖ್ಯಾತೆ ಪಡೆದಿರುವ ದಸರಾ ಹಬ್ಬದ ಆಯುಧ ಪೂಜೆ ಮಾಡುವ ದಸರ ಹಬ್ಬವನ್ನು ಇಂದು ಕೂಡ್ಲಿಗಿ ಪಟ್ಟಣದಲ್ಲಿ ಹೂ ಅಂಗಡಿಗಳ ಮುಂದೆ ಕಿಕ್ಕಿರಿದು ನಿಂತ್ತು ಜನರು ಹೂ ಹಣ್ಣು ಕಾಯಿ ಬಾಳೆಹಣ್ಣು ಹಾಗೂ ಇತರೆ ಪೂಜೆ ಸಾಮಗ್ರಿಗಳನ್ನು ತೆಗೆದು ಕೊಳ್ಳಲಿಕ್ಕೆ ಹಳ್ಳಿ ಹಳ್ಳಿಗಳಿಂದ ಬಂದಂತಹ ಜನರು ಪಟ್ಟಣದಲ್ಲಿ ಇಂದು ದಸರಾ ಹಬ್ಬದ ಕಳೆ ಜಾತ್ರೆಯಂತೆ ಕಂಡು ಬರುವಂತಿತ್ತು ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್ ರವರ ಆಫೀಸ್ ಡ್ರೈವರ್ ಆದ ಹಮಾನುಲ್ಲಾ ಇವರು ಕಚೇರಿಯ ವಾಹನಕ್ಕೆ ವಿಶೇಷವಾಗಿ ದಸರಾ ಹಬ್ಬದ ಪ್ರಯುಕ್ತವಾಗಿ ಕಾರಿಗೆ ಮುಂಭಾಗದ ಬಾನೆಟ್ ಮೇಲೆ ಕನ್ನಡದ ಬಾವುಟದ ಸಂಕೇತವನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿರುವುದು ಕಂಡು ಬಂದಿತು ಹಾಗೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹ ಭಕ್ತಿ ಭಾವದಿಂದ ದಸರಾ ಹಬ್ಬದ ಪ್ರಯುಕ್ತವಾಗಿ ಆಸ್ಪತ್ರೆಯ ಮುಂಬಾಗದಿಂದ ಬಾಗಿಲಿಗೆ ಬಾಳೆ ಕಂಭ ಹಾಗೂ ಹೂ ತೋರಣಗಳಿಂದ ಅಲಂಕರಿಸಿ ಆಯುಧ ಪೂಜೆಯನ್ನು ಮಾಡಿ ದೇವರ ಭಕ್ತಿಗೆ ಪಾತ್ರರಾಗಿ ಅನಾರೋಗ್ಯ ದಿಂದ ಆಸ್ಪತ್ರೆಗೆ ಬರುವ ಎಲ್ಲಾ ಜನರಿಗೆ ದೇವರು ಒಳ್ಳೆಯ ಆರೋಗ್ಯವನ್ನು ಕೊಡಲಿ ಹಾಗೂ ಆಸ್ಪತ್ರೆಗೆ ಬಂದು ಹೋಗುವ ಸರ್ವರಿಗೂ ದೇವರು ಆರೋಗ್ಯ ಕೊಟ್ಟು ಅವರವರ ಕುಟುಂಬವನ್ನು ದೇವರು ಅವರವರ ನಂಬಿಕೆಗೆ ಆಶೀರ್ವಾದದ ಕೃಪೆ ಧಯೇ ಪಾಲಿಸಲಿ ಎಂದು ಪ್ರಶಾಂತ ರವರು ಎಲ್ಲಾ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ಪರವಾಗಿ ನಾಡಿನ ಎಲ್ಲಾ ಜನತೆಗೆ ದಸರಾ ಹಬ್ಬದ ಶುಭಾಶಯಗಳು ತಿಳಿಸಿದರು.ಈ ಸಂರ್ಭದಲ್ಲಿ ಡಾಕ್ಟರ್ ರಮ್ಯಾ ಡಾಕ್ಟರ್ ಅಚ್ಚುತ್ ನಾಯಕ್, ಡಾಕ್ಟರ್ ಮನ್ಸೂರ್ ಕಿವಿ ಮತ್ತು ಗಂಟಲು ತಜ್ಞರು ಕಚೇರಿ ಅಧೀಕ್ಷಕರಾದ ಕೆ.ಬಿ.ಎಂ ವೀರಭದ್ರಯ್ಯ ನರ್ಸಿಂಗ್ ಆಫೀಸರ್ಗಳಾದ ಗೀತಾ, ಸರೋಜಾ, ಕೊಟ್ರಮ್ಮ ಕುಮಾರಿ ಆಶಾ ಬೇಗo, ಜ್ಯೋತಿ, ಈರಣ್ಣ, ಚಂದ್ರಶೇಖರ್, ತಿಪ್ಪೇಸ್ವಾಮಿ,ನಾಗರಾಜು, ದೊಡ್ಡಪ್ಪ, ಪ್ರಯೋಗಶಾಲ ತಜ್ಞರಾದ ಬೋರಣ್ಣ, ಸುನಿಲ್ ಕುಮಾರ್, ಸಾತಿಹಾಳ್ ಮಹಾಂತೇಶ್ ಅಂಗಡಿ, ಬಿ ಎಂ ವೀರೇಶ್,ಕಚೇರಿ ಸಿಬ್ಬಂದಿಗಳಾದ ಲತಗೌಡ್ರು,ಇನ್ನು ಮುಂತಾದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು,
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ