ಶಿವಾನಂದ ನಗರ ಓವರ್ ಹೆಡ್ ಟ್ಯಾಂಕ್ ಸ್ವಚ್ಛತೆಯ – ಮರೀಚಿಕೆ ಜನರ ಆಕ್ರೋಶ.
ರೋಣ ಫೆ.02

ಪಟ್ಟಣದ 16 ನೇ. ವಾರ್ಡ್ನಲ್ಲಿರುವ ಓವರ್ ಹೆಡ್ ಟ್ಯಾಂಕ್ ತುಂಬಿದ ಮೇಲೆ ಹೆಚ್ಚುವರಿ ನೀರು ಸುವ್ಯಸ್ಥಿತವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದರಿಂದ ಪಕ್ಕದ ಖಾಲಿ ಜಾಗದಲ್ಲಿ ನೀರು ನಿಂತು ಕೆರೆಯಂತೆ ನಿರ್ಮಾಣವಾಗಿದೆ. ಇದರಿಂದಾಗಿ ಆ ನೀರು ನಿಂತ ಜಾಗ ಸೊಳ್ಳೆಗಳ ವಾಸ ಸ್ಥಳವಾಗಿದೆ ಸಂಜೆಯಾದರೆ ಸಾಕು ಇಲ್ಲಿ ಸೊಳ್ಳೆಗಳ ಕಾಟ ಎಲ್ಲ ಮನೆಗಳಿಗೆ ತಪ್ಪಿದ್ದಲ್ಲ ಅದೆಷ್ಟು ಜನರು ಮಲೇರಿಯಾ ರೋಗದಿಂದ ಬಳಲಿ ವಾಸಿಯಾದವರು ಇದ್ದಾರೆ. ಶಿವಾನಂದ ನಗರದ ಮುಖ್ಯ ರಸ್ತೆಯ ಪುರಸಭೆ ಮಳಿಗೆಗಳ ಹಿಂಭಾಗದಲ್ಲಿ ಓವರ್ ಹೆಡ್ ಟ್ಯಾಂಕ್ ಇದ್ದು ಅದರ ಪಕ್ಕದಲ್ಲಿಯೇ ರಾಜ ಕಾಲುವೆ ಕೂಡ ಇದೆ. ಟ್ಯಾಂಕ್ ತುಂಬಿದ ಮೇಲೆ ಹೆಚ್ಚುವರಿ ನೀರು ರಾಜ ಕಾಲುವೆಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ಎಂದು ಸದಸ್ಯ ಸಂತೋಷ ಕಡಿವಾಲ ಅವರು ಪುರಸಭೆ ಮುಖ್ಯಾಧಿಕಾರಿಗೆ ಹಲವು ಬಾರಿ ಹೇಳಿದ್ದು. ಇದುವರೆಗೂ ಮುಖ್ಯಾಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.ತುಂಬಿದ ಮೇಲೆ ನೀರು ಪಕ್ಕದ ಖಾಲಿ ಜಾಗದಲ್ಲಿ ಶೇಖರಣೆಯಾಗಿ ಕೆರೆಯಂತಾಗಿದೆ. ಇದರಲ್ಲಿ ದನ-ಕರುಗಳು ಸೇರಿದಂತೆ ಹಂದಿಗಳ ಹಾವಳಿ ಹೆಚ್ಚಾಗಿದ್ದು ನೀರು ಕಲುಷಿತ ಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅಕ್ಕ ಪಕ್ಕದಲ್ಲಿ ಶಿವಾನಂದ ನಗರ ಮತ್ತು ಕೆ.ಇ.ಬಿ ಕಾಲೊನಿಗಳ ಮನೆಗಳಿದ್ದು ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಇದರಿಂದ ಹಲವು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಅಷ್ಟೇ ಅಲ್ಲ ಇಲ್ಲಿ ಯಾವುದೇ ರೀತಿಯ ಸ್ವಚ್ಛತಾ ಕಾರ್ಯ ನಡೆಯದೆ ಅಲ್ಲಲ್ಲಿ ಜಾಲಿ ಕಂಠಿಗಳು ಬೆಳೆದು ಹಲವಾರು ಸರಿಸೃಪಗಳ ವಾಸ ಸ್ಥಳವಾಗಿದೆ ‘ಓವರ್ ಹೆಡ್ ಟ್ಯಾಂಕ್ ಪಕ್ಕದಲ್ಲಿಯೇ ರಾಜ ಕಾಲುವೆ ಇದ್ದರೂ ಹೆಚ್ಚುವರಿ ನೀರು ರಾಜ ಕಾಲುವೆಗೆ ಹರಿಯಲು ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪುರಸಭೆ 16 ನೇ. ವಾರ್ಡ್ ಸದಸ್ಯ ಸಂತೋಷ ಕಡಿವಾಲ ತಿಳಿಸಿದ್ದಾರೆ. ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ವರದಿ ಕಂಡ ಮೇಲಾದರೂ ಈ ಸಮಸ್ಯೆ ಬಗೆಹರಿಯುವುದಾ ಕಾಯ್ದು ನೋಡೋಣ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ ಗದಗ