ಶಿಕ್ಷಕರು ಸಂಸ್ಕಾರವಂತ ಮಕ್ಕಳನ್ನು – ರೂಪಿಸ ಬೇಕು.
ಬೇವೂರು ಮಾ.05

ತಂದೆ ತಾಯಿ ಹಿರಿಯರಿಂದ ಬರುವ ಜೀವನ ಮೌಲ್ಯಗಳು ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶಕ ಎನಿಸಿವೆ. ಇಂದು ಜ್ಞಾನವಂತ, ಸೃಜನಶೀಲ ಮಕ್ಕಳನ್ನು ರೂಪಿಸುವುದು ರೊಟ್ಟಿಗೆ ಸಂಸ್ಕಾರವಂತ ಮಕ್ಕಳನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಜನಪರ ಸಾಹಿತ್ಯ, ಶರಣ ಸಾಹಿತ್ಯ, ದಾಸ ಸಾಹಿತ್ಯದ ಚಿಂತನೆಗಳನ್ನು ಪರಿಚಯಿಸಿ ಸನ್ಮಾರ್ಗ ತೋರುವ, ಸಂಸ್ಕಾರ ತುಂಬುವ ಕಾರ್ಯವನ್ನು ಗುರು ಬಳಗ ಮಾಡಬೇಕಿದೆ ಎಂದು ಬೇವೂರಿನ ಪಿ.ಎಸ್ ಸಜ್ಜನ ಕಲಾ ಮಹಾ ವಿದ್ಯಾಲಯದ ಇತಿಹಾಸ ಉಪನ್ಯಾಸಕ ಡಾ, ಎ.ಎಮ್ ಗೊರಚಿಕ್ಕನವರ ಹೇಳಿದರು. ಬೇವೂರಿನ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಕ್ಷರ ಜ್ಞಾನದೊಟ್ಟಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ ಬಲ ಅವಶ್ಯಕ ಎಂದು ಹೇಳಿದರು. ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಬೇವೂರಿನ ಹಿರಿಯ ಮುಖಂಡರು ಶಿಕ್ಷಣ ಪ್ರೇಮಿಗಳು ಆದ ಶ್ರೀ ಮುರುಗೆಪ್ಪ ವೈಜಾಪೂರ ಸೃಜನಶೀಲತೆಯನ್ನು ರೂಢಿಸಿಕೊಂಡ ವಿದ್ಯಾರ್ಥಿಗಳು ನಾಡಿನ ಆಸ್ತಿಯಾಗಿ ಬೆಳೆಯುತ್ತಾರೆ. ಜನ್ಮ ನೀಡಿದ ತಂದೆ ತಾಯಿಗಳಿಗೆ ಅಕ್ಷರ, ಅರಿವು, ಜ್ಞಾನ ನೀಡುವ ಗುರುಗಳಿಗೆ ಗೌರವ ಹೆಮ್ಮೆ ತರುವ ಕಾರ್ಯ ಸಾಧನೆಗಳನ್ನು ಮಕ್ಕಳು ಮಾಡಬೆಕೆಂದು, ಪುಸ್ತಕ ಪ್ರೇಮಿಗಳಾಗಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಬೇಕೆಂದು ಅವರು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಮಹನೀಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಮುಖ್ಯ ಗುರು ಮಾತೆಯರಾದ ಶ್ರೀಮತಿ ಪ್ರೇಮಾ ಉದಗಟ್ಟಿ ಚಾರಿತ್ಯವನ್ನು ಕಳೆದು ಕೊಂಡರೆ ವಿದ್ಯಾರ್ಥಿಗಳು ಬದುಕನ್ನು ಕಳೆದು ಕೊಂಡಂತೆ, ದೇಶ ಪ್ರೇಮ ಬೆಳೆಸಿ ಕೊಂಡು ಸಮಾಜದ ಸೇವೆಗೆ ಸದಾ ಸಿದ್ದ ಶಿಕ್ಷಕರು ಸಂಸ್ಕಾರವಂತ ಮಕ್ಕಳನ್ನು ರೂಪಿಸ ಬೇಕಾಗುವಂತಹ ರಾಗಿರಬೆಕೆಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ಅವರು ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂಗಣ್ಣ ಶಿರೂರ, ಉಪಾದ್ಯಕ್ಷೆ ಶ್ರೀಮತಿ ರೇಣುಕಾ ಕರಕನ್ನವರ, ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿ ತಳವಾರ, ಸೇರಿದಂತೆ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಬಸವರಾಜ ತುಂಬಗಿ, ಶ್ರೀಮತಿ ರತ್ನಾ ತೆಲಗಿ, ಬುದ್ದಿವಂತಪ್ಪ ಮಾದರ, ಶಿವಣ್ಣ ಬಂಡಿವಡ್ಡರ, ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಬಸವರಾಜ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಶಿವಲೀಲಾ ಮರಿಗೌಡರ ನಿರೂಪಿಸಿ ವಂದಿಸಿದರು. ಶಿಕ್ಷಕರಾದ ಬಿ.ಕೆ ಬಡಿಗೇರ, ಸಹಶಿಕ್ಷಕಿಯರಾದ ಶ್ರೀಮತಿ ಆರ್.ವಾಯ್. ಕೋಟಿ, ಶ್ರೀಮತಿ ಎಸ್.ಆರ್ ನಧಾಪ ಕಾರ್ಯ ಕ್ರಮದಲ್ಲಿ ಭಾಗಿ ಯಾಗಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.