ಅವ್ಯವಸ್ಥೆಯ ಆಗರ ಸೂಕ್ತ ಕ್ರಮಕ್ಕೆ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದಿಂದ ಆಗ್ರಹ.
ಗದಗ ಸಪ್ಟೆಂಬರ್.7

ಅವ್ಯವಸ್ಥೆಯ ಆಗರವಾಗಿರುವ ಗದಗ ಬೆಟಗೇರಿ ನಗರ ಸಭೆಯ ಕಸ ವಿಲೆವಾರಿ ಘಟಕ (SWM ಸೈಟ್) ತಕ್ಷಣ ಪರಿಸರ ಅಭಿಯಂತರ ಆನಂದ ಬದಿಯವರನ್ನು ಅಮಾನತ್ತು ಮಾಡಲು ಮತ್ತು ಕೂಡಲೆ ಅವ್ಯವಸ್ಥೆಯನ್ನು ಸರಿ ಪಡಿಸುವಂತೆ, ಗದಗ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಘವೇಂದ್ರ ಪರಸಪ್ಪ ಪರಾಪೂರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ರಾಘವೇಂದ್ರ ಪರಾಪೂರ ಗದಗ ಬೆಟಗೇರಿ ನಗರ ಸಭೆಯ ಕಸ ವಿಲೆವಾರಿ ಘಟಕ (SWM ಸೈಟ್) ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ಕೆಲಸ ಮಾಡುವ ನಗರ ಸಭೆಯ ಕಸ ವಿಲೆವಾರಿ, ವಾಹನ ಚಾಲಕರು ಇಂತ ರಸ್ತೆಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ವಾಹನ ಚಕ್ರಗಳ ಹರಸಾಹಸ ಪಟ್ಟು ಹೊರ ತೆಗೆಯುವುದರೊಳಗೆ ಸುಸ್ತಾಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಸ ವಿಲೇವಾರಿ ಟ್ರ್ಯಾಕ್ಟರ್ ಮತ್ತು ವಾಹನಗಳ ಸಹ ಬಿದ್ದಿವೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗಾಯಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಜೀವಕ್ಕೆ ಅನಾಹುತ ಆಗುವ ಸಂಭವೂ ಇದೆ. ಸದರಿ ವಿಷಯದ ಬಗ್ಗೆ ಪರಿಸರ ಅಭಿಯಂತರಾದ ಆನಂದ ಬದಿಯವರಿಗೆ SWM ಸೈಟ್ನಲ್ಲಿರುವ ಸೂಪರ್ವೈಸರ್ ಸಾಕಷ್ಟು ಬಾರಿ ದೂರು ನೀಡಿರುತ್ತಾರೆ. ಅಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು ತಮ್ಮ ಕಷ್ಟವನ್ನು ಸಾಕಷ್ಟು ಹೇಳಿಕೊಂಡಿದ್ದಾರೆ. ಗದಗ-ಬೆಟಗೇರಿ ನಗರ ಸಭೆಯ SWM ಗ್ರುಪ್ಗೆ ಸಹ ಸೂಪರ್ವೈಸರ್ ಹಾಕಿದ್ದಾರೆ. ಆದರೂ ಅಧಿಕಾರಿಗಳಾದ ಬದಿಯವರು ಈ ಬಗ್ಗೆ ಯಾವುದೆ ಕ್ರಮ ತೆಗೆದುಕೊಳ್ಳದೆ ಸುಖಾಸುಮ್ಮನೆ ಹಾರೈಕೆಯ ಉತ್ತರವನ್ನು ನೀಡುತ್ತಿದ್ದಾರೆ.ಸದರಿ ಅವ್ಯವಸ್ಥೆಗೆ ತುತ್ತಾಗಿರುವ ಸೈಟ್ನಲ್ಲಿ ಕಾರ್ಮಿಕರು ಪಡುವ ಕಷ್ಟವನ್ನು ದಿನಾಂಕ 05/09/2023 ರಂದು ಬೆಳಿಗ್ಗೆ 10 ಘಂಟೆಯ ಸುಮಾರಿಗೆ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಅಧ್ಯಕ್ಷರಾದ ನಾನು ಹಾಗೂ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಅಧ್ಯಕ್ಷ ಶ್ರೀ ರಾ ದೇ ಕಾರಭಾರಿ, ಖುದ್ದಾಗಿ ಸ್ಥಳ ವೀಕ್ಷಿಸಿ ಸದರಿ ಪ್ರಕರಣದ ಕುರಿತು ಕ್ರಮಕ್ಕಾಗಿ ಮಾನ್ಯ ಗದಗ ಜಿಲ್ಲಾಧಿಕಾರಿಗಳಾದ ತಮ್ಮ ಗಮನಕ್ಕೆ ಸಹ ತರಬಯಸುತ್ತೇನೆಸದರಿ ಪ್ರಕರಣದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಅತೀವ ತೊಂದರೆಯಾಗುತ್ತಿದ್ದು ಅವರ ಆರೋಗ್ಯಕ್ಕೆ ಮತ್ತು ಜೀವಕ್ಕೆ ಅಪಾಯವಾಗುವ ಪರಿಸ್ಥಿತಿ ಇದೆ ಯಾರ ಮುಂದೆಯೂ ಹೇಳಿಕೊಳ್ಳಲು ಆಗದ ಭಯದಲ್ಲಿ ಇಂತಹ ಅವ್ಯವಸ್ಥೆಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಹೇಳಿದರೂ ನಗರ ಸಭೆಯ ಆರೋಗ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಅಧಿಕಾರಿ ಆನಂದ ಬದಿಯವರು ಕ್ರಮ ಕೈಗೊಳ್ಳುತ್ತಿಲ್ಲ ಹಾಗೂ ಆನಂದ ಬದಿಯವರು ಸೈಟ್ ವಿಜಿಟ್ ಹೊಗುವುದು ಸಹ ಅತಿ ವಿರಳ ಅಪ ರೂಪಕ್ಕೊಮ್ಮೆ, ಮಾನ್ಯ ಜಿಲ್ಲಾಧಿಕಾರಿಗಳು ಗದಗ-ಬೆಟಗೇರಿ ನಗರದ ಸ್ವಚ್ಛತೆಗಾಗಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಇಂತಹ ಕಸದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರ ಸುರಕ್ಷತೆಗಾಗಿ ಮಾನವೀಯತೆಯ ದೃಷ್ಟಿಯಿಂದ ತಾವುಗಳು ಕ್ರಮ ಕೈಗೊಳ್ಳಬೇಕೆಂದು ಕಳಕಳಿಯಾಗಿ ವಿನಂತಿಸಿದರು.ಈ ಕೂಡಲೆ ಸದರಿ ವಿಷಯದ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಮತ್ತು ಬೇಜವಾಬ್ದಾರಿ ತೋರಿದ ಅಧಿಕಾರಿಯನ್ನು ಅಮಾನತ್ತು ಮಾಡಲು ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪಿ ಪರಾಪೂರ ಹಾಗೂ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಅಧ್ಯಕ್ಷ ಶ್ರೀ ರಾ ದೇ ಕಾರಭಾರಿ ಇಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಮನವಿ ಸ್ವೀಕರಿಸಿದ ನಂತರ ಮಾನ್ಯ ಜಿಲ್ಲಾಧಿಕಾರಿಗಳು ಮಾತನಾಡಿ ಆ ಸ್ಥಳಕ್ಕೆ ಹೋಗಿ ಭೇಟಿ ಮಾಡುತ್ತೇನೆ ನಂತರ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ರಾಘವೇಂದ್ರ ಪರಸಪ್ಪ ಪರಾಪೂರ
ಮೊಬೈಲ್ ನಂ-:98801 61018