ಕಲಕೇರಿ ಗ್ರಾಮದಲ್ಲಿ ಯುಗಾದಿ ಪಾಡ್ಯ ನಿಮಿತ್ತವಾಗಿ ಬಣ್ಣದ ಹಬ್ಬ ಆಚರಣೆ.
ಕಲಕೇರಿ ಏಪ್ರಿಲ್.09

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಯುಗಾದಿ ಪಾಡ್ಯ ನಿಮಿತ್ಯವಾಗಿ ಕಲಕೇರಿಯಲ್ಲಿ ಬಣ್ಣದ ಹಬ್ಬವನ್ನು ಆಚರಣೆ ನೆರವೇರಿತು.ಎಂ.ಪಿ. ನದಾಫ್ ಗುರುಗಳು ನಮ್ಮ ಭಾಗದಲ್ಲಿ ಶ್ರೀ ವೀರಘಂಟಿ ಮಡಿವಾಳೇಶ್ವರ ಎಲ್ಲೆಲ್ಲಿ ಇದ್ದಾರೋ ಅಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡುವುದಿಲ್ಲ ಇಂದು ನಮ್ಮ ಭಾಗದಲ್ಲಿ ತಲೆ ತಲಾಂತರ ದಿಂದ ಬಂದಂತಹ ಯುಗಾದಿ ಹಬ್ಬಕ್ಕೆ ನಮ್ಮಲ್ಲಿ ನಾನಾತರ ರಂಗ ಪಂಚಮಿಯನ್ನು ಬಣ್ಣದ ಹಬ್ಬ ಆಚರಣೆ ನಾವು ಮಾಡುತ್ತಾ ಬಂದಿದ್ದೇವೆ. ಇಲ್ಲಿ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಣ್ಣದ ಹಬ್ಬವನ್ನು ಯುಗಾದಿ ಹಬ್ಬಕ್ಕೆ ನಾವು ರಂಗ ಪಂಚಮಿ ಎಂದು ಆಚರಣೆ ಮಾಡುತ್ತೇವೆ. ದೊಡ್ಡಪ್ಪ ಗುಮಶೆಟ್ಟಿ ಇವರು ನಮ್ಮಲ್ಲಿ ಜಾತಿ ಮತ ಎನ್ನದೆ ಹಿಂದೂ ಮುಸ್ಲಿಂ ಕೂಡಿ ಕೊಂಡು ಬಣ್ಣದ ಹಬ್ಬವನ್ನು ಆಚರಣೆ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.ಶ್ರೀ ವೀರಗಂಟಿ ಮಡಿವಾಳೇಶ್ವರ ಎರಡು ಅಗ್ನಿ ಉತ್ಸವ ಇದ್ದ ಕಾರಣಕ್ಕೆ ನಮ್ಮಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ಊರಿನ ಗ್ರಾಮಸ್ಥರು ಮಾತನಾಡಿ ಅನಾದಿ ಕಾಲದಿಂದ ಬಂದಿರುವ ಯುಗಾದಿ ಹಬ್ಬಕ್ಕೆ ನಾವು ಗ್ರಾಮಸ್ಥರು ರಂಗ ಪಂಚಮಿ ಎಂದು ಆಚರಣೆ ಮಾಡುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದರು.ಶ್ರೀಶೈಲ ಅಡಿಕಿ. ಅಶೋಕ್ ಭೋವಿ. ವಿನೋದ್ ವಡಿಗೇರಿ.ಮೈನುದ್ದಿನ್ ಮನಿಯರ. ಮಡಿವಾಳಪ್ಪ ತಳವಾರ. ಶಿವಾನಂದ ಬೆಕಿನಾಳ. ಶರಣು ಗುಡುಗುಂಟಿ. ರಾಜು ಮಾದರ. ಅರ್ಜುನ ನಡುವಿನಮನಿ, ಸೋಮಶೇಖರ್ ಸಜ್ಜನ, ರಾಜು ಆಲಗೂರು, ರಾಜು ಅಡಿಕಿ, ಸುನಿಲ ಕಲಕೇರಿ, ಇನ್ನೂ ಅನೇಕರು ಗ್ರಾಮದ ಯುವಕರು ಮುಖಂಡರು ಪಾಲ್ಗೊಂಡು ಯುಗಾದಿ ಬಣ್ಣದ ಹಬ್ಬವನ್ನು ಅದ್ದೂರಿಯಿಂದ ಆಚರಣೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.