ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರ ನೇಮಕ.
ಮಸ್ಕಿ ಜು.10

ಪಟ್ಟಣದ ಬ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬಣಜಿಗ ಸಮಾಜದ ತಾಲೂಕ ಸಮಿತಿಯ ಒಮ್ಮತದ ಮೇರೆಗೆ ತಾಲೂಕ ಘಟಕ ಘಟಕದ ಗೌರವ ಅಧ್ಯಕ್ಷ ಹಾಗೂ ತಾಲೂಕ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಕರ್ನಾಟಕ ರಾಜ್ಯದ ಬಣಜಿಗರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಸಮಿತಿ ಮಸ್ಕಿ ವತಿಯಿಂದ ಬುಧವಾರ ಬ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಸಮಾಜ ಬಾಂಧವರ ಸಭೆಯನ್ನು ಕರೆದು ನೂತನ ತಾಲೂಕಾ ಗೌರವಾಧ್ಯಕ್ಷರನ್ನಾಗಿ ನಾಗರಾಜ್ ಚೌಶೆಟ್ಟಿ ಹಾಗೂ ತಾಲೂಕಾ ಘಟಕದ ಅಧ್ಯಕ್ಷರನ್ನಾಗಿ ವೀರೇಶ್ ಸೌದ್ರಿ ಅವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಯಿತು. ನಂತರ ನೂತನ ಅಧ್ಯಕ್ಷರನ್ನು ಶಾಲು ಮತ್ತು ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬಣಜಿಗ ಸಮಾಜದ ಮುಖಂಡರಾದ ಮಲ್ಲೇಶಪ್ಪ ಬ್ಯಾಳಿ, ಪಂಪಣ್ಣ ಗುಂಡಳ್ಳಿ, ಶಶಿಕಾಂತ್ ಬ್ಯಾಳಿ, ಉಮಾಕಾಂತಪ್ಪ ಸಂಗನಾಳ, ಡಾಕ್ಟರ್ ಮಲ್ಲಿಕಾರ್ಜುನ ಇತ್ಲಿ , ಬಸಲಿಂಗಪ್ಪ ಶೆಟ್ಟಿ ಸುಗಣ್ಣ ಬಾಳೆಕಾಯಿ ಬಸವರಾಜ್ ಬೆಲ್ಲದ, ನಾಗರಾಜ್ ಯಂಬಲದ, ವೀರೇಶ್ ತಾಳಿಕೋಟಿ, ಡಾಕ್ಟರ್ ಮಲ್ಲೇಶಪ್ಪ,ಬಸವರಾಜ್ ಗುಂಡಳ್ಳಿ,ಗವಿಸಿದ್ದಪ್ಪ ಸಾವುಕಾರ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್ ಕಿಳ್ಳಿ.ಇಲಕಲ್ಲ.