ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುತ್ತದೆ – ಪ್ರಾಚಾರ್ಯ ಎಂ.ಎಸ್ ಗೌಡರ.

ರೋಣ ಮಾ.07

ರೋಣ ನಗರದ ಪ್ರತಿಷ್ಠಿತ ಮಹಾ ವಿದ್ಯಾಲಯವಾದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ, ರಾಜೀವ್ ಗಾಂಧಿ ಕಲಾ ಹಾಗೂ ವಾಣಿಜ್ಯ ಪದವಿ ಕಾಲೇಜಿನ‍ 2024 -25 ನೇ. ಸಾಲಿನ‍ ಎನ್.ಎಸ್.ಎಸ್ ನ ವಾರ್ಷಿಕ ವಿಶೇಷ ಶಿಬಿರವನ್ನು‍ ರೋಣ ತಾಲೂಕಿನಿಂದ‍ ಆರು ಕಿಲೋಮೀಟರ್ ದೂರದಲ್ಲಿರುವ ದತ್ತು ಗ್ರಾಮ‍ ಬಾಸಲಾಪುರ ಆಯೋಜಿಸಲಾಗಿತ್ತು. ಶಿಬಿರದ ಮೊದಲ ದಿನದಲ್ಲಿ‍ ಶಿಬಿರದ ಉದ್ಘಾಟನಾ ಸಮಾರಂಭ ಆಚರಿಸಲಾಯಿತು‍. ಈ ಸಮಾರಂಭದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ‍ ಉದ್ಘಾಟನೆ ಮಾಡಲಾಯಿತು.‌ ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಎನ್.ಎಸ್.ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಜೆ.ಪಿ ಪಾಟೀಲರವರು ಎನ್.ಎಸ್ ಘಟಕದ ಇತಿಹಾಸ ಹಾಗೂ ಅದರ ಉದ್ದೇಶಗಳಾದ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶ್ರಮದಾನ, ಪ್ರಗತಿಪರ ಚಿಂತನೆ, ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ, ಶೈಕ್ಷಣಿಕಮತ್ತು ಸಾಂಸ್ಕೃತಿಕ ಚಟುವಟಿಕೆಗಳುಮಕ್ಕಳು ಮತ್ತು ಮಹಿಳಾ ಜಾಗೃತಿ, ಪ್ರಾಚ್ಯ ವಸ್ತುಗಳ ಸಂರಕ್ಷಣೆ ನಾಡಗೀತೆ ದೇಶ ಭಕ್ತಿ ಗೀತೆ ರಾಷ್ಟ್ರಗೀತೆ ಎನ್.ಎಸ್.ಎಸ್. ಗೀತೆ ಇವುಗಳ ಮೂಲಕ ಜನರಿಗೆ ರಾಷ್ಟ್ರೀಯ ಜಾಗೃತಿ ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆಯ ಹಾಗೂ ಶಿಬಿರದ ಮಹತ್ವವನ್ನು ವಿವರಿಸಿದರು. ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಎಸ್.ಗೌಡರ ರವರು ಕಾರ್ಯಕ್ರಮ ಉದ್ದೇಶಿಸಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕನ ಕರ್ತವ್ಯಗಳು ಬದಲಾಯಿಸಿ ಸ್ವಯಂ ಸೇವಕನು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಉತ್ತಮ ಅಭಿಪ್ರಾಯವನ್ನು ಜನರಲ್ಲಿ ಬಿಂಬಿಸುವುದು. ಸಮುದಾಯದ ಅವಶ್ಯಕತೆಗಳು, ಸಮಸ್ಯೆಗಳು ಮತ್ತು ಸಂಪನ್ಮೂಲಗಳನ್ನು ಗುರುತಿಸುವುದು.ತಾನು ಕಲಿತ ಅನುಭವದ ಸಹಾಯದಿಂದ ಸಮುದಾಯದ ಆವಶ್ಯಕತೆಗಳಿಗೆ ಸ್ಪಂದಿಸುವುದು. ಪ್ರತಿಯೊಂದು ಕಾರ್ಯಕ್ರಮವನ್ನು ಡೈರಿ ಪುಸ್ತಕದಲ್ಲಿ ವ್ಯವಸ್ಥಿತವಾಗಿ ಬರೆದು ಕಾಲಕಾಲಕ್ಕೆ ಆದ ಬೆಳವಣಿಗೆಗಳನ್ನು ಗಮನಿಸುವುದು. ವರ್ಷಕ್ಕೊಮ್ಮೆ ರಕ್ತದಾನ ಮಾಡುವುದು. (ಆರೋಗ್ಯವಂತ ಪುರುಷರು ಪ್ರತೀ ಮೂರು ತಿಂಗಳಿಗೊಮ್ಮೆ ಮತ್ತು ಸ್ತ್ರೀಯರು ಪ್ರತೀ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು) ಯೋಜನಾಧಿಕಾರಿ ಅಥವಾ ತಂಡದ ನಾಯಕನ ಅಡಿಯಲ್ಲಿ ಅವರ ಮಾರ್ಗದರ್ಶನದಂತೆ ಕೆಲಸ ಮಾಡುವುದು. ಆತ್ಮವಿಶ್ವಾಸ ಬೆಳೆಸಿ ಕೊಳ್ಳುವುದು ಮತ್ತು ಕೆಲಸ ಕಾರ್ಯಗಳನ್ನು ಸ್ವತಃ ನಿರ್ವಹಿಸುವುದು. 24 ಗಂಟೆಗಳೂ ಸೇವೆಗೆ ಲಭ್ಯರಾಗಿರುವುದು. ಎನ್.ಎ. ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುವುದು. ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಶ್ರಮದಾನ ಇತ್ಯಾದಿಗಳನ್ನು ಚಾಚೂ ತಪ್ಪದೆ ಪಾಲಿಸುವುದು.ಕೆಲಸ ಮಾಡುವಾಗ ಕಡ್ಡಾಯವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಬ್ಯಾಡ್ಜನ್ನು ಧರಿಸುವುದು. ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತನ್ನ ಸ್ನೇಹಿತರನ್ನು ಪ್ರೇರೇಪಿಸುವುದು ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ‍ ವೇದಮೂರ್ತಿ ಪಂಚಾಕ್ಷರಯ್ಯ ಹಿರೇಮಠ ಅಧ್ಯಕ್ಷತೆಯನ್ನು ಮಿಥುನ್.ಜಿ ಪಾಟೀಲ್ ಮುಖ್ಯ ಅತಿಥಿಗಳಾಗಿ,‍ ಪ್ರಾಚಾರ್ಯರಾದ ಎಂ.ಎಸ್ ಗೌಡರ ,ರವೀಂದ್ರ ಕೊಪ್ಪದ‍ ಶರಣಪ್ಪ ಮೇಟಿ‍ ಶಾಂತಮ್ಮ ಪಾಟೀಲ್‍ ರೇಣುಕಾ ಹುಲ್ಲುರ , ‍ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಜಿ.ಪಿ ಪಾಟೀಲ್ ಶಿಬಿರಾರ್ಥಿಗಳು ಕಾಲೇಜಿನ ಉಪನ್ಯಾಸಕ ಬಳಗ ಹಾಗೂ ಊರಿನ ಸಮಸ್ತ ಜನರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button