ದಲಿತ ವಿರೋಧಿ ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕಾಗಿ ಮನವಿ.

ಇಂಡಿ ಆಗಷ್ಟ.9

ಪಟ್ಟಣದಲ್ಲಿ ದಿನಾಂಕ 04-08-2023 ರಂದು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ,ಸಾವ೯ಜನಿಕರ ಸಮ್ಮುಖದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಪೂವ೯ಭಾವಿ ಸಭೆಯಲ್ಲಿ ಇಂಡಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಬಿ.ಜೆ.ಇಂಡಿ ಇವರು ‘ಎಲ್ಲಾ ದಲಿತ ಸಂಘಟನೆಗಳು ಸುಲಿಕೋರರು ‘ಎಂದು ದಲಿತ ಸಮುದಾಯವನ್ನು ಕೀಳಾಗಿ ಮಾತಾಡಿ,ಅವಮಾನ ಮಾಡಿದ್ದು ಇರುತ್ತದೆ.ಕೂಡಲೇ ಇಂತಹ ಅಸಭ್ಯ ವತ೯ನೆಯ ಅಧಿಕಾರಿಯ ಮೇಲೆ sc/st ಕಾಯ್ದೆಯಡಿ ಜಾತಿ ನಿಂದನೆ ದೂರು ದಾಖಲಿಸಿ , ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕಾ ಆರ್.ಪಿ.ಐ (ಅಂಬೇಡ್ಕರ್) ಪದಾಧಿಕಾರಿಗಳು ಮಾನ್ಯ ಉಪವಿಭಾಗಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಈ ಮನವಿ ಕುರಿತು ಸಂಬಂಧಿಸಿದ ಅಧಿಕಾರಿಗಳು ದಲಿತರ ಕುರಿತು ಅವಹೇಳನಕಾರಿ ಮಾತನಾಡಿದ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ವಿವಿಧ ರೀತಿಯ ಆಯಾಮಗಳಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾಯ೯ವಾಗುತ್ತದೆ ಎಂದು ಆರ್.ಪಿ.ಐ( ಅಂಬೇಡ್ಕರ್) ಸಂಘಟನೆಯ ತಾಲೂಕಾ ಅಧ್ಯಕ್ಷರಾದ ಚಂದ್ರಶೇಖರ ಮೇಲಿನಮನಿ ಹೇಳಿದರು.ಈ ಸಂದರ್ಭದಲ್ಲಿ ಪರಶುರಾಮ ಭಾವಿಕಟ್ಟಿ,ಪರಶುರಾಮ ಉಕ್ಕಲಿ ,ಶಿವಾನಂದ ಹರಿಜನ,ಬಸವರಾಜ ಮಾಶ್ಯಾಳ.ಮೇರಾ ವಾಘ್ಮೋರೆ.ಚಂದ್ರಾಮ ಇತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button