ಆರೋಗ್ಯ ಮೇಳ ಉದ್ಘಾಟಿಸಿದ – ಸಚಿವ ದಿನೇಶ್ ಗುಂಡೂರಾವ್.
ಮಾನ್ವಿ ಮಾ.15

ಸರಕಾರ ಜನಪರ ಯೋಜನೆಗಾಗಿ ಬದ್ಧವಾಗಿದ್ದರಿಂದ ಮಾನ್ವಿಯಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಡಿಗ್ರಿ ಕಾಲೇಜು ಆವರಣದಲ್ಲಿ ಆರೋಗ್ಯ ಇಲಾಖೆ ಶನಿವಾರ ಹಮ್ಮಿ ಕೊಂಡಿದ್ದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಶಾಸಕ ಹಂಪಯ್ಯ ನಾಯಕ ಹಾಗೂ ಈ ಭಾಗದ ಸಚಿವ ಎನ್.ಎಸ್ ಬೋಸರಾಜು ಅವರು ನಮ್ಮ ಜೊತೆ ಸಂಪರ್ಕ ಮಾಡಿ ಮಾನ್ವಿ ತಾಲೂಕಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಿ ಎಂದು ಕೇಳಿದ್ದರಿಂದ ಸರಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆರೋಗ್ಯ ಮೇಳದಲ್ಲಿ ತಜ್ಞ ವೈದ್ಯರು ಭಾಗವಹಿಸಿದ್ದು, ಆಯಾ ಚಿಕಿತ್ಸೆಗೆ ಸಲಹೆಯಂತೆ ಮಾಹಿತಿ ಪಡೆದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜನರು ಆರೋಗ್ಯವಾಗಿ ಇರಬೇಕು ಎಂದು ಸರಕಾರ ಬಯಸುತ್ತದೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿಮಾನ್ವಿ