ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಐಶರ್ ಹಾಗೂ ಶ್ರೀ ಕಾಲಭೈರವ ಟ್ರಾಕ್ಟರ್ಸ್.
ಹಿರಿಯೂರು ಫೆಬ್ರುವರಿ.28

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮೈಸೂರು ರಸ್ತೆಯಲ್ಲಿ ಇರುವ ಐಶರ್ ಹಾಗೂ ಶ್ರೀ ಕಾಲ ಭೈರವ ಟ್ರಾಕ್ಟರ್ ಶಾಖೆಯಲ್ಲಿ ಇಂದು ಕೊನಿಗರ ಹಳ್ಳಿಯ ರೈತರಾದ ಶ್ರೀಯುತ ಮಧು ಚಂದ್ರ ಗೌಡ ಮತ್ತು ಮತ್ತೋರ್ವ ವೆಂಗ್ಲಾ ಪುರದ ರೈತರಾದ ಶ್ರೀಯುತ ನಾಗರಾಜಪ್ಪರವರು ಇಂದು ತಲಾ ಒಂದು ಈಚರ್ ಕಂಪನಿಯ ಟ್ರಾಕ್ಟರ್ ಖರೀದಿಸುವ ಮೂಲಕ ರೈತರಲ್ಲಿ ಮತ್ತಷ್ಟು ನಂಬಿಕೆ ಹಾಗೂ ಆತ್ಮ ವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈಚರ್ ಕಂಪನಿಯ ಟ್ರಾಕ್ಟರ್ ಗಳು ರೈತರಿಗೆ ತುಂಬಾ ಅನುಕೂಲ ಹಾಗೂ ತುಂಬಾ ರಿಯಾತಿ ದರದಲ್ಲಿ ಸುಲಭ ಕಂತುಗಳಲ್ಲಿ ರೈತರಿಗೆ ಸಿಗುವ ಏಕೈಕ ಕಂಪನಿ ಇದಾಗಿದೆ ಇದರ ಸದುಪಯೋಗ ಎಲ್ಲ ರೈತರು ಪಡೆದುಕೊಳ್ಳಬೇಕು ಮತ್ತು ಐಶರ್ ಟ್ರಾಕ್ಟರ್ ಗಳು ಎಲ್ಲ ರೈತರಿಗೆ ಅತೀ ಹೆಚ್ಚು ಮೈಲೇಜು ಹಾಗೂ ದೀರ್ಘಕಾಲಿಕ ಬಾಳಿಕೆ ಮತ್ತು ಉತ್ತಮ ಗುಣಮಟ್ಟದ ಇಂಜಿನ್ ಹೊಂದಿದೆ ಉಚಿತ ಸರ್ವೀಸ್ ಕೊಡುವುದರ ಮೂಲಕ ಎಲ್ಲ ರೈತರ ಮನ ಗೆದ್ದಿರುವ ಹಾಗೂ ಆತ್ಮ ವಿಶ್ವಾಸ ಗಳಿಸುವಲ್ಲಿ ದಾಖಲೆ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.

ಇತ್ತೀಚಿನ ಸಾವಯವ ಕೃಷಿ ಪದ್ಧತಿ ಹಾಗೂ ಆಧುನಿಕ ಎಲ್ಲ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ತಂತ್ರಾಶಗಳನ್ನು ಮತ್ತು ನವ ವಿನೂತನ ಟೆಕ್ನಾಲಾಜಿಯನ್ನು ಹಾಗೂ ಸುರಕ್ಷತೆಯನ್ನು ಈಚರ್ ಕಂಪನಿಯ ಟ್ರಾಕ್ಟರ್ ಗಳು ರೈತರಿಗೆ ಬೆನ್ನುಲುಬಾಗಿ ಕಾರ್ಯ ನಿರ್ವಹಿಸುತ್ತವೆ ಅಲ್ಲದೆ ಅಷ್ಟೇ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ವನ್ನು ತಂದು ಕೊಡುತ್ತವೆ ಎಂಬುದು ಅಷ್ಟೇ ಸತ್ಯವಾಗಿದೆ.ಈಗಾಗಲೇ ರೈತರಿಂದ ಸಹ ಒಳ್ಳೆಯ ಸ್ಪಂದನೆ ದೊರೆತಿದ್ದು ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಹಾಗಾಗಿ ನೀವು ಕೂಡ ಮುಂದಿನ ದಿನಗಳಲ್ಲಿ ಈ ಕಂಪನಿಯ ಬೆಳವಣಿಗೆಗೆ ಸಹಕಾರ ನೀಡಿ ಎಲ್ಲ ರೈತ ಬಾಂಧವರು ಹಾಗೂ ಗ್ರಾಹಕರು ಸರ್ವೊತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮಾಲೀಕರಾದ ಶ್ರೀಯುತ ನಿರಂಜನ್ ಸರ್ ಗ್ರಾಹಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನ ಐಶರ್ ಹಾಗೂ ಶ್ರೀ ಕಾಲ ಭೈರವ ಟ್ರಾಕ್ಟರ್ ಶಾಖೆಯ ಮಾಲೀಕರು ಆದ ಶ್ರೀಯುತ ನಿರಂಜನ್,ಶ್ರೀಮತಿ ರಂಜಿತಾ, ಮೆಕಾನಿಕ್ ರಶೀದ್,ಹರೀಶ್, ಫೈರೋಜ್,ಸೇಲ್ಸ್ ಮ್ಯಾನ್ ಬಸವರಾಜು ಮತ್ತು ರಂಗನಾಥ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ:ಶಿವಮೂರ್ತಿ.ಟಿ.ಕೋಡಿಹಳ್ಳಿ.ಚಳ್ಳಕೆರೆ