ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದಿಢೀರನೆ ಭೇಟಿ ನೀಡಿ ಪರಿಶೀಲಿಸಿದ – ಶಾಸಕ ಡಾ, ಶ್ರೀ ನಿವಾಸ್.ಎನ್.ಟಿ
ಸಂಡೂರು ಆ.06

ಕೂಡ್ಲಿಗಿಯ ಸಂಡೂರು ರಸ್ತೆಯಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್.ಎನ್.ಟಿ ಅವರು ದಿ. 06-08-24 ರಂದು ವಿವಿಧ ಸಮಸ್ಯೆಗಳ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಿಢೀರನೆ ಭೇಟಿ ನೀಡಿ ಮಹಿಳಾ ಅಧಿಕಾರಿ ಗಳೊಂದಿಗೆ ಮಹತ್ವದ ಸಭೆ ನಡೆಸಿ ಕ್ಷೇತ್ರದಲ್ಲಿನ ಬಡವರು – ಕಡು ಬಡವರ ಮಕ್ಕಳ ಶಿಶು ಅಭಿವೃದ್ಧಿಗೆ ತೊಂದರೆ ಯಾಗದಂತೆ ನೋಡಿ ಕೊಳ್ಳುವಂತೆ ಖಡಕ್ಕಾಗಿ ಎಚ್ಚರಿಕೆ ನೀಡಿದರು. ನಮ್ಮ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರವನ್ನು ಸಹಿಸುವುದಿಲ್ಲ ಎಂದರು. ಅಂಗನವಾಡಿ ಕೇಂದ್ರಗಳ ಕೊಠಡಿಗಳ ಅಂಕಿ ಅಂಶಗಳು, ಮಕ್ಕಳ ಸಂಖ್ಯೆ ಹಾಗೂ ಸಿಬ್ಬಂದಿಯ ಮಾಹಿತಿ ಪಡೆದು ಕೊಂಡರು. ಮಕ್ಕಳು ಮತ್ತು ಗರ್ಭಿಣಿಯರಿಗೆ ಗುಣಮಟ್ಟದ ಆಹಾರ ಕಿಟ್ ವಿತರಿಸಲು ಸೂಚಿಸಿದರು. ಕೆಲವರಿಗೆ ಗೃಹ ಲಕ್ಷ್ಮೀಯ ಹಣ ಬರದೇ ಇರುವ ಸಮಸ್ಯೆಗಳು ಈ ಹಿಂದೆಯೇ ಕೇಳಿ ಬಂದಿವೆ. ಆಧಾರ ಕಾರ್ಡ್ ಗಳಲ್ಲಿ ಅಕ್ಷರ ದೋಷಗಳು ಕಂಡು ಬಂದಿರುವುದರಿಂದ ತಾಂತ್ರಿಕವಾಗಿ ಕೆಲವು ತೊಡಕುಗಳು ಎದುರು ಆಗದಂತೆ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳು ಕೆಲಸ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದರು. ಕಛೇರಿಯ ಕುಂದು ಕೊರತೆಗಳನ್ನು ಆಲಿಸಿದರು. ಈ ವೇಳೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.