ಸಸಿ ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬ ಆಚರಣೆ.

ಮಸ್ಕಿ ಜೂನ್.07

ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಗುರುವಾರ ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ (ಸಿವಿಲ್ ಇಂಜಿನಿಯರ್ ) ಮತ್ತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮಸ್ಕಿ ತಾಲೂಕ ಸಮಿತಿಯ ಅಧ್ಯಕ್ಷರಾದ ಬಾಲರಾಜ ವಿರೂಪಾಪುರ ಇವರ ಹುಟ್ಟುಹಬ್ಬದ ನಿಮಿತ್ತ ಹಸಿರು ಮರಗಳನ್ನು ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು. ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ (ಸಿವಿಲ್ ಇಂಜಿನಿಯರ್ ) ಮತ್ತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮಸ್ಕಿ ತಾಲೂಕ ಸಮಿತಿಯ ಅಧ್ಯಕ್ಷರಾದ ಬಾಲರಾಜ ವಿರೂಪಾಪುರ ಇವರ ಹುಟ್ಟುಹಬ್ಬದ ನಿಮಿತ್ತ ಶ್ರೀ ಪ್ರಕೃತಿ ಫೌಂಡೇಶನ್ ಮಸ್ಕಿ ಇವರ ಸಂಯುಕ್ತಾ ಆಶ್ರಯದಲ್ಲಿ ಬಿಸಿಲ ನಾಡೇ ಎಂದು ಹೆಸರಾದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಡಾ!! ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ಸುಮಾರು 25 ಕ್ಕೂ ಹೆಚ್ಚು ಹಸಿರು ಗಿಡಗಳನ್ನು ನೆಡುವ ಮೂಲಕ ವಿಶೇಷ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಕೊಳ್ಳಲಾಯಿತು.

ನಂತರ ಮಾತನಾಡಿದ ಎಸ್ ಎಫ್ ಐ ತಾಲೂಕ ಅಧ್ಯಕ್ಷ ಬಸವಂತ ಹಿರೇ ಕಡಬೂರು ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ ಇವರು ಇಲ್ಲಿಯತನಕ ಯಾವುದೇ ರೀತಿಯ ಸರಕಾರಿ ಸೌಲಭ್ಯವನ್ನು ಪಡೆಯದೆ, ಯಾವುದೇ ರೀತಿ ಒಂದು ರೂಪಾಯಿ ದೇಣಿಗೆ ಸಹ ಪಡೆಯದೆ, ಸ್ವತಹ ತಾವು ಗಳಿಸಿದ ದುಡಿಮೆಯಲ್ಲಿ ಸುಮಾರು 320 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡುವ ಮೂಲಕ ಮಸ್ಕಿ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿಯನ್ನು ವಹಿಸಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾದ ಉಪಾಧ್ಯಕ್ಷರಾದ ಚನ್ನಬಸವ ಮೂಡಲದಿನ್ನಿ, ಖಜಾಂಚಿಯಾದ ಶಿವರಾಜ್ ಗುಡಗಲದಿನ್ನಿ, ಸದಸ್ಯರಾದ ಹುಚ್ಚಪ್ಪ ಬಸಾಪುರ, ಬಸವಂತ ಹಿರೇ ಕಡೂಬೂರ್ (SFI ಅಧ್ಯಕ್ಷರು), ಶಿವಮೂರ್ತಿ ಬಳಗಾನೂರ ( ಅಧ್ಯಕ್ಷರು ಶ್ರೀ ಪ್ರಕೃತಿ ಫೌಂಡೇಶನ ಮಸ್ಕಿ ) ಇನ್ನಿತರರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button