ಡೆಂಗ್ಯೂ ರೋಗ ತಡೆಗೆ ನೀರಿನ ಸಂಗ್ರಹ ಪರಿಕರಗಳ ಮೇಲೆ – ತಪ್ಪದೇ ಮುಚ್ಚಳಿಕೆ ಹಾಕಿರಿ.
ಅಮೀನಗಡ ಆ.17



ತಾಂಡಾದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ ಡೆಂಗ್ಯೂ ಚಿಕೂನ್ ಗುನ್ಯಾ ತಡೆಗೆ ಆರೋಗ್ಯ ಅರಿವು ಜನಜಾಗೃತಿ ಆಯೋಜಿಸಲಾಗಿತ್ತು.
ಅಮೀನಗಡದ ಆಶಾ ಕ್ಷೇತ್ರವಾರು ಲಾರ್ವಾ ಉತ್ಪತ್ತಿ ಸಮೀಕ್ಷೆ ಪರೀಕ್ಷೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ.ಎಸ್ ಕೊಲ್ಕಾರ ಮನೆ ಮನೆ ಸಮೀಕ್ಷೆ ಮಾಡಿ ಸಾರ್ವಜನಿಕರಿಗೆ ಸೊಳ್ಳೆಗಳ ಕಚ್ಚುವಿಕೆಯಿಂದ ಬರುವ ಮಲೇರಿಯಾ ಆನೇಕಾಲು ಡೆಂಗ್ಯೂ ಚಿಕೂನ್ ಗುನ್ಯಾ ತಡೆಗೆ ಸೊಳ್ಳೆ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆ ಬಗ್ಗೆ ಮಾಹಿತಿ ಆರೋಗ್ಯ ಜಾಗೃತಿ ಮೂಡಿಸಿದರು.
ಆರೋಗ್ಯ ನೀರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು “ಕಡಿತ ಚಿಕ್ಕದಾದರೂ ಹಾನಿ ದೊಡ್ಡದು” ಡೆಂಗ್ಯೂ ರೋಗ ವೈರಾಣು ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುವುದು ಸೊಳ್ಳೆಗಳು ಲಾರ್ವಾ ಉತ್ಪತ್ತಿಯನ್ನು ಬ್ಯಾರಲ್ ಸಿಮೆಂಟ್ ತೋಟ್ಟಿ ಟೆಂಗಿನ ಚಿಪ್ಪು ಟಾಯರ್ ಟ್ಯೂಬ್ ಒಡೆದ ಬಾಟಲ್ ತಗ್ಗು ಪ್ರದೇಶ ಚರಂಡಿ ಮಳೆ ನೀರು ಸಂಗ್ರಹದಿಂದ ಲಾರ್ವಾ ಉತ್ಪತ್ತಿಯಾಗಿ ಮಾರಕ ರೋಗಗಳು ಹರಡುತ್ತವೆ.
ಆದುದರಿಂದ ಡೆಂಗ್ಯೂರೋಗ ನಿಯಂತ್ರಣ ಲಾರ್ವಾ ಉತ್ಪತ್ತಿ ತಡೆಗೆ ಸಾರ್ವಜನಿಕರು ಸಹಕರಿಸಲು ಕರೆ ಡೆಂಗ್ಯೂ ರೋಗ ತಡೆಗೆ ಸ್ವಯಂ ರಕ್ಷಣಾ ಕ್ರಮಗಳಾದ ನೀರಿನ ಸಂಗ್ರಹ ಪರಿಕರಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು, ಸೊಳ್ಳೆಬತ್ತಿ ಸೊಳ್ಳೆ ಪರದೆ ನಿರೋಧಕ ಬಳಸಬೇಕು.
ಮನೆ ಸುತ್ತಮುತ್ತ ಪರಿಸರ ಸ್ವಚ್ಛತೆ ಕಾಪಾಡ ಬೇಕೆಂದರು. ಡೆಂಗ್ಯೂ ಚಿಕೂನ ಗುನ್ಯಾ ತಡೆಗೆ ಮನೆ ಮನೆ ಭೇಟಿ ನೀಡಿ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹಿಸಿ ಸಮೀಕ್ಷೆ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಸ್ವಯಂ ಸೇವಕರು ಗ್ರಾಮದ ಯುವಕರು ಮುಖಂಡರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

