ತುಳಸಿ ಗಿಡಕ್ಕೆ ಮದುವೆ ಮಾಡುವುದು ಮೌಢ್ಯಾಚರಣೆ.
ಹೊಸಪೇಟೆ ಡಿಸೆಂಬರ್.8

ನಗರದಲ್ಲಿರುವ ಡಾ.ಬಿ ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ಗುಚ್ಛ ಹಾಕುವ ಮೂಲಕ ಮಹಾಪರಿ ನಿರ್ವಹಣಾ ದಿನವನ್ನು ಬುಧುವಾರ ಆಚರಿಸಲಾಯಿತು. ಡಾ. ಬಿ ಆರ್ ಅಂಬೇಡ್ಕರ್ ಅವರ 67.ನೇ ಮಹಾಪರಿ ನಿರ್ವಾಣ ದಿನ ಆಚರಣೆಯ ಅಂಗವಾಗಿ ನಗರದ ಆಕಾಶವಾಣಿ ಏರಿಯಾದಲ್ಲಿರುವ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ, ಮೌಢ್ಯ – ಮೂಢನಂಬಿಕೆ ನಿರ್ಮೂಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಓದುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಜೆ 6.ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಆಕಾಶವಾಣಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಡಾ.ಬಿ ಆರ್.ಅಂಬೇಡ್ಕರ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಮೌಢ್ಯ ಮತ್ತು ಮೂಢನಂಬಿಕೆಗಳು ದಲಿತ ಚಳವಳಿಯ ಮೇಲೆ ಆಗುತ್ತಿರುವ ಅಡ್ಡ ಪರಿಣಾಮಗಳ ಕುರಿತು ಚರ್ಚಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸೌಭಾಗ್ಯ ಅವರು ಹಿಂದಿನ ಕಾಲದಿಂದಲೂ ತುಳಸಿ ಗಿಡಕ್ಕೆ ಮದುವೆ ಮಾಡಿಕೊಂಡು ಬರಲಾಗುತ್ತಿದೆ.

ಈಗಲೂ ಅದನ್ನು ಮುಂದುವರಿಯುತ್ತಿದೆ ಇದು ಅಕ್ಷರ ಸಹ ಮೌಢ್ಯ, ತುಳಸಿ ಗಿಡದಲ್ಲಿ ಔಷಧೀಯ ಹಾಗೂ ಆರೋಗ್ಯ ಕಾಪಾಡುವ ಗುಣಗಳಿವೆ ವಿಚಾರ. ಆದರೆ ಪುರೋಹಿತ ವರ್ಗವು ಅದನ್ನು ಬೇರೆ ರೀತಿಯಲ್ಲಿ ಕಥೆಯನ್ನು ಕತೆ ನಮ್ಮ ದಲಿತರ ತಲೆಯಲ್ಲಿ ತುಂಬಿದ್ದಾರೆ ಹುಟ್ಟು ಹಬ್ಬದ ಬಗ್ಗೆ ನಾವು ತಿಳಿದು ಅರಿತು ಕೊಳ್ಳಬೇಕು ಯಾವುದೇ ಆಚರಣೆ ಬಗ್ಗೆ ಪ್ರಶ್ನೆ ಮಾಡಿ ಅದನ್ನು ತಿಳಿದು ಕೊಂಡಾಗ ಮಾತ್ರ ನಾವು ವೈಚಾರಿಕತೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಇದಕ್ಕೆ ಪೂರಕವಾಗಿ ನಾಗರಾಜ್ ಪತ್ತಾರ್ ಇವರು ಭೀಮಗೀತೆ ಮತ್ತು ಕ್ರಾಂತಿ ಗೀತೆಗಳನ್ನ ಹಾಡಿದರು. ಮಾನವ ಬಂದುತ್ವ ವೇದಿಕೆಯ ವಿಜಯನಗರ ಜಿಲ್ಲಾ ಸಂಚಲಕರಾದ ಸೋಮಶೇಖರ್ ಬಣ್ಣದಮನೆ , ಎಂ.ಜಂಬಯ್ಯನಾಯಕ, ಸೌಭಾಗ್ಯ ಲಕ್ಷ್ಮಿ, ರತ್ನ, ಡಾ.ಚನ್ನಪ್ಪ, ಡಾ.ಚೆಲುವರಾಜ್, ದುರುಗಪ್ಪ ಪೂಜಾರ್, ಚಂದ್ರಶೇಖರ, ಬಿ.ತಾಯಪ್ಪ ನಾಯಕ, ಬಿ ರಮೇಶ್ ಕುಮಾರ್, ಕ್ರಿಷ್ಣ ಮಾಸ್ತರ್, ಸೂರಿ ಮಾದಿಗ, ಧನ್ ರಾಜ್, ಉಮಾ ಮಹೇಶ್ವರ, ಸಣ್ಣ ಮಾರೆಪ್ಪ, ಕಾಗಿಗನೂರು ಯರಿಸ್ವಾಮಿ, ನೀಲಕಂಠ, ರಮಾಲಿ, ಬಿ ಹನುಮಂತಪ್ಪ ಸೇರಿದಂತೆ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಪ್ರಮುಖವಾಗಿ ಮೌಢ್ಯಕ್ಕೆ ಸಂಬಂಧಿಸಿದಂತೆ ಹಾಜರಿದ್ದ ಎಲ್ಲರೂ ಸಹ ತಮ್ಮದೇ ದಾಟಿಯಲ್ಲಿ ಮೌಢ್ಯಗಳ ಕುರಿತು ಮಾತನಾಡಿದರು.ಮಾನವ ಬಂದುತ್ವ ವೇದಿಕೆ ಕರ್ನಾಟಕ, ದಲಿತ ಹಕ್ಕುಗಳ ಸಮಿತಿ, ಸಮುದಾಯ, ಭಾರತ ಜ್ಞಾನ ವಿಜ್ಞಾನ ಸಮಿತಿ,ಪ್ರಗತಿಪರ ಸಂಘಟನೆಗಳೂ ಸೇರಿದಂತೆ ಅನೇಕ ಬುದ್ದಿಜೀವಿಗಳು ರಾತ್ರಿಯ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್ ಹೊಸಪೇಟೆ