ಶಾಲಾ ಪ್ರಾರಂಭೋತ್ಸವ – ಮಕ್ಕಳಿಗೆ ಸಂಭ್ರಮದ ಸ್ವಾಗತ.

ತಾಯಕನಹಳ್ಳಿ ಮೇ.30

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಶ್ರೀ ಗುರು ಕನಕ ವಿದ್ಯಾ ಕೇಂದ್ರ ಶಾಲೆಯಲ್ಲಿ ಮೇ 29 ಇಂದು ಶಾಲಾ ಪ್ರಾರಂಭೋತ್ಸವ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ, ಮಕ್ಕಳನ್ನು ಪ್ರೀತಿಯಿಂದ ಹೂ ಗುಚ್ಚವನ್ನು ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ಜತೆಗೆ ಸಿಹಿ ತಿಂಡಿ ವಿತರಿಸಿ ಶಾಲೆಗೆ ಬರಮಾಡಿ ಕೊಳ್ಳಲಾಯಿತು. ನಲವತ್ತೆಂಟು ದಿನಗಳ ಬೇಸಗೆಯ ರಜೆ ಮುಗಿದಿದೆ. ಇಷ್ಟು ದಿನ ಆಟ-ತುಂಟಾಟಗಳಿಂದ ಹೆತ್ತವರನ್ನು ಸುಸ್ತಾಗಿಸಿದ್ದ ಚಿಣ್ಣರು ಇಂದು ಬುಧವಾರ ಹೆಗಲಿಗೆ ಪಾಟಿ ಚೀಲ ಜೋತು ಹಾಕಿಕೊಂಡು, ಭಾರವಾದ ಹೆಜ್ಜೆಗಳೊಂದಿಗೆ ಶಾಲೆಗಳತ್ತ ತೆರಳಿದರು. ಶಾಲಾ ಆರಂಭದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಹಾಗೂ ಆಯಾ ಶಾಲೆಗಳ ಅಭಿವೃದ್ಧಿ ಸಮಿತಿಯಿಂದ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿತ್ತು. ಈ ವೇಳೆ ಶಾರದಾ ದೇವಿಯ ಪೂಜೆ ಮಾಡಿ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸುನೀತ ಗುರುರಾಜ್, ಕಾರ್ಯದರ್ಶಿ ಬಿ ಟಿ ಮಂಜಣ್ಣ, ಸಹ ಶಿಕ್ಷಕರಾದ ಹಂಪಮ್ಮ ಪೂಜಾರ್, ಮಂಜುಳ ಎಂ, ಸಿ ಆರ್ ಸುಮಿತ್ರ, ಪ್ರಭಾಕರ್ ಎಂ, ರುದ್ರಮ್ಮ ಸಿ, ಬಸವರಾಜ್ ಜಿ. ಪಿ, ಕುಬೇರ ಎಂ ಜೆ , ಸರೋಜಾ ಆರ್, ಹಾಗೂ ಹೂಡೇಂ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಗ್ರಂಥಪಾಲಕರಾದ ತುಡುಮ ಗುರುರಾಜ್ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button