ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿಬೇಕು – ಕೆ.ಎ ಹಾದಿಮನಿ.
ರೋಣ ಏ.06

ಆರೋಗ್ಯ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನೈರ್ಮಲ್ಯ ಇರುವಲ್ಲಿ ಆರೋಗ್ಯ ಇರುತ್ತದೆ. ನೈರ್ಮಲ್ಯದ ಕೊರತೆ ಇದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ ಎಂದು ಹೇಳಿದರು.ಕೆ.ಎಸ್.ಎಸ್ ಕಾಲೇಜ ಹಮ್ಮಿಕೊಳ್ಳಲಾಗಿರುವ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಹೊಸಳ್ಳಿ ಗ್ರಾಮದಲ್ಲಿ ಡಾಕ್ಟರ್, ಕೆ.ಎ ಹಾದಿಮನಿ ಯವರು ಆರೋಗ್ಯ ಹಾಗೂ ಸ್ವಚ್ಛತೆ ಕುರಿತು ಉಪನ್ಯಾಸ ನೀಡಿದರು.ಜನ ಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಮಾತ್ರ ಅವರ ಜೀವನ ಮಟ್ಟ ಉತ್ತಮವಾಗಲು ಸಾಧ್ಯ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಶೇ. 80 ರಷ್ಟು ಆರೋಗ್ಯದ ಸಮಸ್ಯೆಗಳು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ. ಜನ ಸಾಮಾನ್ಯರಲ್ಲಿ ಅರಿವಿನ ಕೊರತೆ ಯಿಂದಾಗಿ ನೈರ್ಮಲ್ಯ ಕೊರತೆ ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ. ಎಂದು ಮಾತನಾಡಿದರು. ಅದೇ ರೀತಿಯಾಗಿ ಎಸ್.ವಿ ರಡ್ಡರ ನಿವೃತ್ತ ಮುಖ್ಯೋಪಾಧ್ಯಾಯರು ಕಾರ್ಯಕ್ರಮ ಕುರಿತುಸ್ವಚ್ಛತೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಮುಖ್ಯವಾದುದು ವೈಯುಕ್ತಿಕ ಸ್ವಚ್ಛತೆ ಅಥವಾ ನಮ್ಮ ದೇಹದ ಸ್ವಚ್ಛತೆ. ನಾವು ತಿನ್ನುವ ಆಹಾರ. ನಮ್ಮ ದೇಹವನ್ನು ಸ್ವಚ್ಛವಾಗಿಡುವ ರೀತಿ. ದೈಹಿಕ ವ್ಯಾಯಾಮ ಇವೆಲ್ಲವೂ ದೇಹದ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಶುಚಿತ್ವದ ಕೊರತೆಯಿಂದಾಗಿ. ವೈಯಕ್ತಿಕ ನೈರ್ಮಲ್ಯದ ಕೊರತೆ ಮನುಷ್ಯನು ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತದೆ. ಉದಾಹರಣೆಗೆ, ಅತಿಸಾರ ಭೇದಿ, ಹುಳುಗಳು, ಟೈಫಾಯ್ಡ್, ಚರ್ಮದ ಸೋಂಕುಗಳು, ಹಲ್ಲಿನ ಸಮಸ್ಯೆಗಳು ಇತ್ಯಾದಿ ಎಂದು ಮಾತನಾಡಿದರು.ಈ ಸಮಯದಲ್ಲಿಎಚ್.ವಿ ಹಿರೇಮಠ, ಅಧ್ಯಕ್ಷರು, ಶ್ರೀ ಬಸವೇಶ್ವರ ಜೀರ್ಣೋದ್ಧಾರ ಸಮಿತಿ ಹಾಗೂ ಮಾಜಿ ಗ್ರಾ.ಪಂ ಸದಸ್ಯರು ಹೊಸಹಳ್ಳಿ, ಭೀಮರಡೇಪ್ಪ ಶಿ ರಡೇರಿ ಉಪಾಧ್ಯಕ್ಷರು, ಬಿ.ಜಿ.ಸ ಎನ್.ಬಿ ಇಟಗಿ. ಹನುಮಂತರಾವ್.ಜಿ ಜಗದಾಳೆ ನೀರಾವರಿ ಇಲಾಖೆ, ಬಸವರಾಜ.ಅಂ ಪಟ್ಟಣಶೆಟ್ಟಿ ರಾಜ್ಯ ಸಂಚಾಲಕರು ಜೆ.ಬಿ.ಎಂ ಸಂಗಪ್ಪ ಕೆ ಸಜ್ಜನರ, ಎ.ಬಿ ಹೊಸಳ್, ಎಸ್.ವಿ ರಡ್ಡರ ನಿವೃತ್ತ ಮುಖ್ಯೋಪಾಧ್ಯಾಯರು, ಮಲ್ಲಪ್ಪ.ಗೂ ಸೊಂಟಿ, ಟಿಪ್ಪುಸುಲ್ತಾನ್ ಹೊಸಹಳ್ಳಿ, ಬಸವರಾಜ ಕುಂದಗೋಳ ಉಪಾಧ್ಯಕ್ಷರು ವಿ.ಎಸ್.ಎಸ್ ಹೊಸಹಳ್ಳಿ, ಶರಣಪ್ಪ ಬ ಕುರಿ,ಶಿವಲಿಂಗಯ್ಯ ಬ ಸ್ಥಾವರಮಠ, ವೀರಪ್ಪ ಮು ಮಾದರ ಮಾಜಿ ಗ್ರಾಂ ಪಂ ಸದಸ್ಯರು ಹೊಸಹಳ್ಳಿ, ಐ ಬಿ ದಂಡಿನ, ಸಿ ಬಿ, ಪೊಲೀಸ್ ಪಾಟೀಲ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ