ಇಂದು ಇಂಡಿಯಲ್ಲಿ ವಿದ್ಯುತ್ ಸುರಕ್ಷತಾ ಅಭಿಯಾನ ಕಾರ್ಯಕ್ರಮ ಜರುಗಿತು.
ಇಂಡಿ ಜನೇವರಿ.18

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ವಿದ್ಯುತ್ ಜಾಗೃತಿ ಮಾಹಿತಿ ನೀಡುತ್ತಾ, ಶ್ರೀಯುತ ಸಿದ್ದಪ್ಪ ಬಿಂಜಿಗೇರಿ ಸರ್ ಅಧೀಕ್ಷಕ ಅಭಿಯಂತರರು ವಿಜಯಪುರ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯುತ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಶ್ರೀ ಪ್ರಶಾಂತಗೌಡ ಯ ಪಾಟೀಲ ಕೇಂದ್ರ ಸಮಿತಿ ಸದಸ್ಯರು ಇಂಡಿ ಇವರು ಮಾತನಾಡಿ ಹೊಸದಾಗಿ ನೇಮಕಗೊಂಡ ಕಿರಿಯ ಪವರ್ ಮ್ಯಾನಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ವಿನಂತಿಸಿದರು .ಪವಾರ್ ಮ್ಯಾನಗಳು ಕೆಲಸ ಮಾಡುವ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಬೇಕು ಅಂತ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಇಂಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಶ್ರೀ S A ಬಿರಾದಾರ ಸರ್ ಕಾರ್ಯ ನಿರ್ವಾಹಕ ಅಭಿಯಂತರರು. ಹಾಗೂ ಇಂಡಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು ಶ್ರೀಯುತ ಎಸ್ ಆರ್ ಮೇಡೆಗಾರ ಸರ್ ಹಾಗೂ ಎಲ್ಲಾ ಉಪ ವಿಭಾಗದ ಗೌರವಾನ್ವಿತ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಭಾಗವಹಿಸಿದರು.ಹಾಗೂ ಕಲ್ಯಾಣ ಸಂಸ್ಥೆಯ ಕೇಂದ್ರ ಸಮಿತಿ ಸದಸ್ಯರುಗಳಾದ ಶ್ರೀ C M ಕಾಂಬಳೆ ಸರ್ , ಶ್ರೀ R K ಚೌವ್ಹಾಣ ಸರ್ , ಹಾಗೂ ನೌಕರರು ಭಾಗವಹಿಸಿದರು. ಶ್ರೀ ಅರ್ಜುನ ಗಂಗಾಧರ ವಿದ್ಯುತ್ ಜಾಗೃತಿ ಗೀತೆ ಹಾಡಿ ಕಾರ್ಯಕ್ರಮ ಮುಗಿಸಿದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ