ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ – ದಲಿತ ವಿಮೋಚನಾ ಜಿಲ್ಲಾ ಸಮಿತಿಯಿಂದ ಹೋರಾಟದ ಎಚ್ಚರಿಕೆ.
ಹುಬ್ಬಳ್ಳಿ ಜನೇವರಿ.25

ಪಟ್ಟಣದ ತಾಲೂಕ ಆಡಳಿತದಿಂದ ಜ.26 ರಂದು ಬೆಳಿಗ್ಗೆ 9-15 ಗಂಟೆಗೆ ಟಿಸಿಎಚ್ ಕಾಲೇಜ ಆವರಣದಲ್ಲಿ 75.ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಜರುಗಲಿದೆ.ಶಾಸಕ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ತಹಶೀಲ್ದಾರ ವ. ತಾಲೂಕಾ ದಂಡಾಧಿಕಾರಿ ನಿಂಗಪ್ಪ ಬಿರಾದಾರ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ನವದೆಹಲಿ ಕರ್ನಾಟಕ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ,ಬಾಗಲಕೋಟ ಶಾಸಕ ಎಚ್.ವೈ.ಮೇಟಿ,ಸಂಸದ ಪಿ.ಸಿ. ಗದ್ದಿಗೌಡರ,ವಿಪ ಸದಸ್ಯರಾದ ಪಿ.ಎಚ್. ಪೂಜಾರ,ಹನಮಂತ ನಿರಾಣ ,ಸುನೀಲಗೌಡ ಪಾಟೀಲ,ಉಮಾಶ್ರೀ, ಪುರಸಭೆ ಆಡಳಿತಾಧಿಕಾರಿ ಜಿಲ್ಲಾ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ,ತಾಪಂ ಆಡಳಿತಾಧಿಕಾರಿ ಡಾ.ಪುನೀತ ಬಿ.ಆರ್, ಪೊಲೀಸ್ ಉಪಾಧೀಕ್ಷಕ ವಿಶ್ವನಾಥರಾವ್ ಕುಲಕರ್ಣಿ, ತಾಪಂ ಇಒ ಮುರಳಿ ದೇಶಪಾಂಡೆ ಮತ್ತು ಸಿಪಿಐ ಸುನೀಲ ಸವದಿ ಉಪಸ್ಥಿತರಿರುವರೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ