ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಂಘದಿಂದ ವಿಜಯನಗರ ಜಿಲ್ಲೆಯ ನೂತನ ಡಿ.ಡಿ.ಪಿ.ಐ ವಿರುದ್ಧ ಪ್ರತಿಭಟನೆ.
ಕೂಡ್ಲಿಗಿ ಆಗಷ್ಟ.8


ವಿಜಯನಗರ ಜಿಲ್ಲೆಗೆ ಇತ್ತೀಚಿಗೆ ಹೊಸದಾಗಿ ನೇಮಕಗೊಂಡಿರುವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಾನ್ಯ ಯುವರಾಜ. ನಾಯ್ಕ್. ಅವರು ಸಮಯ ಪಾಲನೆ ಮಾಡದೆ ಕರ್ತವ್ಯ ನಿಷ್ಠೆ ಪಾಲಿಸದೆ ಶಿಕ್ಷಕರನ್ನು ಕರೆಸಿಕೊಂಡು ಪ್ರತಿಷ್ಠೆಗಾಗಿ ತಮ್ಮನ್ನು ಸ್ವಾಗತ ಮಾಡಿಕೊಂಡಿರುವ ಕ್ರಮದ ವಿರುದ್ಧ ಉಪ ನಿರ್ದೇಶಕರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಕೂಡ್ಲಿಗಿ ತಹಶೀಲ್ದಾರ್ ಟಿ. ಜಗದೀಶ್. ಅವರ ಮೂಲಕ ಕರ್ನಾಟಕ ಸರ್ಕಾರ ಶಿಕ್ಷಣ ಸಚಿವರಿಗೆ ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ತಾಲೂಕು ಘಟಕದ ವತಿಯಿಂದ ಮನವಿ ಸಲ್ಲಿಸಿದರು.
ಶಾಲಾ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಶಿಕ್ಷಕರನ್ನು ಹೊಸಪೇಟೆ ತಮ್ಮ ಕಛೇರಿಗೆ ಕರೆಸಿಕೊಂಡು ಪ್ರತಿಷ್ಠೆಗಾಗಿ ತಮ್ಮನ್ನು ಸ್ವಾಗತ ಮಾಡಿಸಿಕೊಂಡಿರುವ ಉಪ ನಿರ್ದೇಶಕರು ಈ ಜಿಲ್ಲೆಯಲ್ಲಿ ಯಾವ ರೀತಿಯಾಗಿ ಸರ್ಕಾರಿ ಶಾಲೆಯನ್ನು ಉಳಿಸಬಲ್ಲರು ಎಂಬ ಪ್ರಶ್ನೆ ಉದ್ಭವಿಸಿರುತ್ತದೆ. ಆದಕಾರಣ ಶಾಲಾ ವೇಳೆಯಲ್ಲಿ ಮಕ್ಕಳ ಅಮೂಲ್ಯವಾದ ಸಮಯವನ್ನು ಹಾಳುಮಾಡಿ, ಮಕ್ಕಳಿಗೆ ಪಾಠ, ಪ್ರವಚನ ಮಾಡುವುದನ್ನು ಬಿಡಿಸಿ, ಶಿಕ್ಷಕರನ್ನು ಕರೆಸಿಕೊಂಡು ಸ್ವಾಗತವನ್ನು ಪಡೆದುಕೊಂಡಿರುವ ಸದರಿ ಉಪ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
ಈ ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕೆಂದು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷ (ಜಿಲ್ಲಾ ಅಧ್ಯಕ್ಷ) ಗುನ್ನಳ್ಳಿ ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಜಿ.ಟಿ ರಾಜಶೇಖರ್, ರಾಜ್ಯ ಕಮಿಟಿ ಸದಸ್ಯರು ಲಕ್ಷ್ಮಿ ದೇವಿ, ಮಂಜುನಾಥ ಹೂಡೇಂ, ತಾಲೂಕು ಅಧ್ಯಕ್ಷ ಭಾಗ್ಯಮ್ಮ, ಜಿಲ್ಲಾ ಕಾರ್ಯದರ್ಶಿ ಹೊನ್ನರಪ್ಪ ಜುಮ್ಮೊಬನಹಳ್ಳಿ, ತಾಲೂಕು ಸಂಚಾಲಕ ಬಸವರಾಜ್, ಹನುಮಂತ ಜಿಲ್ಲಾ ಸಂಚಾಲಕ, ಕರಿಯಣ್ಣ, ಮರುಳಸಿದ್ದಪ್ಪ, ಹೊಲೆಪ್ಪ, ನಬಿ ಸಾಬ್, ವಿ ಷಡಕ್ಷರಿ, ಪದ್ಮಾವತಿ, ಬಸವರಾಜ್, ಜಿ ಮಾರೇಶ್, ಕೋಟೇಶ್ ಸೇರಿದಂತೆ ತಾಲೂಕಿನ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸರ್ವ ಸದಸ್ಯರು, ಕಟ್ಟಡ ಕಾರ್ಮಿಕರು, ಪೋಷಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ