ಸರ್ಕಾರ ದಿಂದ ನ್ಯಾಯಾಂಗ ವ್ಯವಸ್ಥೆಗೆ ಸರಿಯಾದ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ, ಬೇಸರ ವ್ಯಕ್ತಪಡಿಸಿದ – ನ್ಯಾ, ಹಂಚಾಟೆ ಸಂಜೀವಕುಮಾರ.

ಹುನಗುಂದ ಏಪ್ರಿಲ್.22

ನ್ಯಾಯಾಂಗ ವ್ಯವಸ್ಥೆಗೆ ಸರ್ಕಾರ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ಇರೋದರಿಂದ ರಾಜ್ಯದ ಅನೇಕ ಜಿಲ್ಲೆ ಮತ್ತು ತಾಲೂಕ ಕೋರ್ಟ್ ಗಳಲ್ಲಿ ಸರಿಯಾದ ಬೆಂಚ್, ಕುರ್ಚಿ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯಿಲ್ಲ ಮತ್ತು ಸರ್ಕಾರಿ ವಕೀಲರ ನೇಮಕವಾಗುತ್ತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಮೂರ್ತಿ ಹಂಚಾಟೆ ಸಂಜೀವಕುಮಾರ ಸರ್ಕಾರದ ಧೋರಣೆಗೆ ಬೇಸರ ವ್ಯಕ್ತಪಡಿಸಿದರು.ಶನಿವಾರ ಸಾಯಂಕಾಲ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬಾಗಲಕೋಟ ಜಿಲ್ಲಾ ನ್ಯಾಯಾಂಗ,ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಹುನಗುಂದ ಮತ್ತು ಇಳಕಲ್ಲ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುನಗುಂದದಲ್ಲಿ ನೂತನ ಜಿಲ್ಲಾ ಮತ್ತು ಸತ್ರ ಸಂಚಾರಿ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋರ್ಟ್ ಗಳ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರೇ ನ್ಯಾಯಾಲಯಗಳಿಂದ ಯಾವದೇ ತರಹದ ರೇವಿನ್ಯೂ (ಆದಾಯ) ಇಲ್ಲ ಅಂತಾರೆ ಆದರೆ ನ್ಯಾಯಾಂಗ ವ್ಯವಸ್ಥೆಯಿಂದ ಪ್ರತಿ ವರ್ಷ ೭ ಕೋಟಿ ಆದಾಯ ನೀಡುತ್ತಿದ್ದರೂ ನ್ಯಾಯಾಂಗ ವ್ಯವಸ್ಥೆಗೆ ಅನುದಾನ ನೀಡಲು ಸರ್ಕಾರದಲ್ಲಿ ಬಜೆಟ್ ಇಲ್ಲವೆಂದು ಹೇಳುತ್ತಿರುವುದು ಬೇಸರ ಸಂಗತಿಯಾಗಿದೆ. ಇನ್ನು ತಮ್ಮ ಹಕ್ಕು ರಕ್ಷಣೆಗಾಗಿ ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯ ಪಡೆಯಲು ಬಂದ ಕಕ್ಷಿದಾರರ ಮತ್ತು ಸಾಕ್ಷಿದಾರರ ಮೇಲೆ ಅಧಿಕಾರ ಚಲಾವಣೆ ಮಾಡದೇ ನ್ಯಾಯಧೀಶರು ಮತ್ತು ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿ ಗೌರವದಿಂದ ಕಾಣಬೇಕು.ಏಕವಚನ ಬಳಿಕೆ ಮಾಡಬೇಡಿ.ಒಬ್ಬ ವ್ಯಕ್ತಿ ಮತ್ತು ಕುಟುಂಬದ ಜೀವನ ಭವಿಷ್ಯವನ್ನು ನಿರ್ಧಾರಿಸುವ ಗುರುತರ ಜವಾಬ್ದಾರ ನಿಮ್ಮ ಮೇಲಿದೆ.ಒಬ್ಬ ನ್ಯಾಯಾಧೀಶರ ಉತ್ತಮ ತೀರ್ಪುನ ಹಿಂದೆ ವಕೀಲರ ಅಗಾಧ ಶ್ರಮ ಇರುತ್ತೆದೆ.ನ್ಯಾಯಾಧೀಶರು ಮತ್ತು ವಕೀಲರು ದಿನದ ೧೬ ಗಂಟೆಯ ಕಾಲ ಅಧ್ಯಯನ ಶೀಲರಾಗಿ ವೈಯಕ್ತಿಕ ಬದುಕನ್ನು ಮರೆತು ಸಮಾಜಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು.ವಕೀಲ ವೃತ್ತಿ ನೈಪಣ್ಯತೆ ಇರಬೇಕು ವೃತ್ತಿಯನ್ನು ವಾಣಿಜೀಕರಣ ವಾಗಬಾರದು.ಬಾಗಲಕೋಟಿ ಜಿಲ್ಲಾ ನ್ಯಾಯಾಲಯದಲ್ಲಿ ೧೦ ಸಾವಿರ ಇತ್ಯರ್ಥವಾಗದೇ ಇರುವ ಪ್ರಕರಣಗಳಿವೆ ಅದರಲ್ಲಿ ಹುನಗುಂದ ಮತ್ತು ಇಳಕಲ್ಲ ತಾಲೂಕಿನಲ್ಲಿ ೩೫೦೦ ಪ್ರಕರಣಗಳಿವೆ ಎಂದರು.ಬಾಗಲಕೋಟಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎನ್.ವಿ.ವಿಜಯ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಸತ್ರ ನ್ಯಾಯಾಲಯ ಆರಂಭವಾಗಿದ್ದು ಈ ಭಾಗದ ಜನರಿಗೆ ಅನುಕೂಲವಾಗಿದೆ.ಮುಂದಿನ ದಿನಗಳಲ್ಲಿ ಹುನಗುಂದ ಮತ್ತು ಇಳಕಲ್ಲ ವಕೀಲರ ಸಂಘದಿಂದ ಸೌಲಭ್ಯಕ್ಕಾಗಿ ಬೇಡಿಕೆಯ ಪ್ರಸ್ತಾವಣೆಯನ್ನು ಸಲ್ಲಿಸಿದರೇ ಅದನ್ನು ಪ್ರಮಾಣಿಕವಾಗಿ ಹೈಕೋರ್ಟಿಗೆ ಕಳಿಸಿ ಕೊಡುವ ಕೆಲಸ ಮಾಡಲಾಗುವುದು ಎಂದರುಕರ್ನಾಟಕ ವಕೀಲರ ಪರಿಷತ್‌ನ ಸದಸ್ಯ ಎಸ್.ಎಸ್. ಮಿಟ್ಟಲಕೋಡ ಮಾತನಾಡಿ ಇಳಕಲ್ಲದಲ್ಲಿ ಆರಂಭವಾಗಿರುವ ಸಂಚಾರಿ ನ್ಯಾಯಾಲಯವನ್ನು ಸಿವಿಲ್ ನ್ಯಾಯಾಲಯದ ಖಾಯಂ ಗೊಳಿಸುವುದು ಮತ್ತು ಸಧ್ಯ ೨ ದಿನದ ನಡೆಯುವ ಈ ಜಿಲ್ಲಾ ಸತ್ರ ಸಂಚಾರಿ ನ್ಯಾಯಾಲಯವನ್ನು ಮುಂದಿನ ದಿನಗಳಲ್ಲಿ ವಾರದ ೬ ದಿನಗಳನ್ನು ನಡೆಯುವಂತೆ ಪರಿಷತ್‌ದಿಂದ ಒತ್ತಾಯ ಮಾಡಲಾಗುವುದು ಅದರಂತೆ ನೀವು ಕೂಡಾ ಇದರ ಬೇಡಿಕೆಯನ್ನು ಹೈಕೋರ್ಟ್ ಸಲ್ಲಿಸಿ ಎಂದರು.ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಬಸವರಾಜ ನೇಸರಗಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹಿರಿಯ ಸಿವಿಲ್ ನ್ಯಾಯಾಧೀಶ ಹನಮಂತರಾವ್ ಕುಲಕರ್ಣಿ, ಹುನಗುಂದ ಮತ್ತು ಇಳಕಲ್ಲ ವಕೀಲರ ಸಂಘದ ಅಧ್ಯಕ್ಷರಾದ ಪ್ರಕಾಶ ಕಠಾಣಿ,ಬಿ.ಎ.ಅವಟಿ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಂ.ಉಪ್ಪಾರ,ವಿ.ಬಿ.ದಮ್ಮೂರಮಠ,ಮಹಿಳಾ ಪ್ರತಿನಿಧಿ ಉಮಾ ಬಳ್ಳೊಳ್ಳಿ,ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಜಶೇಖರ ಕಡಿವಾಳ ಸೇರಿದ್ದಂತೆ ಅನೇಕ ನ್ಯಾಯಾಧೀಶರು ಹಾಗೂ ವಕೀಲರು ಇದ್ದರು.ವಕೀಲ ರಾಜಕುಮಾರ ಬಾದವಾಡಗಿ ಸ್ವಾಗತಿಸಿದರು,ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಬಿ.ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು,ಎಂ.ಎಚ್.ಮಳ್ಳಿ ಪರಿಚಯಿಸಿದರು.ಆರ್.ಎಚ್.ಕೊಕ್ಕಾಟೆ ನಿರೂಪಿಸಿ ವಂದಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button