ನಕ್ಕುಂದಿ ಗ್ರಾಮಸ್ಥರ ಕಷ್ಟ ಕೇಳಪ್ಪ – ಇ.ಓ ಖಾಲಿದ್ ಅಹ್ಮದ್.
ನಕ್ಕುಂದಿ ಏ.04

ಗ್ರಾಮೀಣ ಭಾಗದ ಜನರ ಕಷ್ಟ ಏನೆಂದು ಕೇಳಿ ಸೌಲಭ್ಯಗಳನ್ನು ನೀಡುವ ಕೆಲಸ ಪಿಡಿಓ ಬಸವರಾಜ ಇ.ಓ ಖಾಲಿದ್ ಅಹ್ಮದ್ ಅವರ ಕೆಲಸ. ಆದರೆ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮಸ್ಥರು ನಮಗೆ ರಸ್ತೆ ನಿರ್ಮಿಸಿ ಕೊಡಿ ಅಂತಾ ತಾಲೂಕ ಪಂಚಾಯತಿಗೆ ದೂರು ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ನಾನಾ ಸಮಸ್ಯೆ ತಾಂಡವಾಡುತ್ತಿದ್ದು, ರಸ್ತೆ ನಿರ್ಮಿಸಿ ರೈತರಿಗೆ ಅನಕೂಲ ಮಾಡಿಕೊಡಬೇಕೆಂದು ತಾಲೂಕ ಪಂಚಾಯತಿಗೆ ದೂರು ಸಲ್ಲಿಸಿದರೂ ನ್ಯಾಯ ಇಲ್ಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಭಿವೃದ್ಧಿ ಅನ್ನೋದು ನಕ್ಕುಂದಿ ಗ್ರಾಮದಲ್ಲಿ ಇಲ್ಲವಾಗಿದ್ದು, ರೈತರು ಕಷ್ಟದ ನಡುವೆ ರಸ್ತೆ ದಿನ್ನಿಗಳ ಮಧ್ಯೆ ಸಂಚಾರ ಮಾಡಬೇಕಾಗಿದೆ. ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರೆ ಸರಕಾರದ ಅನುದಾನ ಯಾರ ಪಾಲಾಗಿದೆ ಅನ್ನೋದು ಗ್ರಾಮಸ್ಥರು ತಾಲೂಕ ಪಂಚಾಯತಿ ಕಚೇರಿಗೆ ಬಂದಿರುವುದೆ ಸಾಕ್ಷಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ