ತಾಲೂಕಿನ ನೀರಮಾನ್ವಿ ಯಲ್ಲಮ್ಮ ದೇವಿ ಜಾತ್ರೆಯ ಹೆಸರಲ್ಲಿ – ಭಕ್ತರಿಗೆ ಮೋಸದಾಟ.
ಮಾನ್ವಿ ಫೆ.17

ಸರಕಾರದ ನಿಯಮಗಳಂತೆ ನಿಯಮಗಳನ್ನು ಪಾಲನೆ ಮಾಡಬೇಕು. ಆದರೆ ಮಾನ್ವಿ ತಹಸೀಲ್ದಾರ್ ರಾಜು ಫಿರಂಗಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಹರಾಜು ಮಾಡಿ ನಿಯಮ ಉಲ್ಲಂಘಿಸಿದ್ದಲ್ಲದೆ ಭಕ್ತರಿಗೆ ಮೋಸವಾದರು ರಾಜು ಫಿರಂಗಿ ಕಣ್ಣಿದ್ದು ಕುರುಡರಾಗಿದ್ದಾರೆಂದು ವೆಂಕಟೇಶ್ವರ ರಾವ್ ಗಂಭೀರ ಆರೋಪ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಯಲ್ಲಮ್ಮ ದೇವಿಯ ಜಾತ್ರೆ ಫೆ. 17 ರಂದು ನಡೆಯಲಿದ್ದು, ಆದರೆ ಸರಕಾರದ ಮಾನದಂಡಗಳಂತೆ ಪಾಲನೆ ಮಾಡದೆ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕಡಿಮೆ ಹರಾಜು ಮಾಡಿ ಕೈ ತೊಳೆದು ಕೊಂಡಿದ್ದಾರೆಂದು ರಾಯಚೂರು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದರು.
ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಟೆಂಗಿನ ಕಾಯಿ ಪ್ರತಿ ಜೋಡಿಗೆ ಹೆಚ್ಚಿಗೆ ಮಾರಾಟ ಮಾಡುತ್ತಿದ್ದರು ಮಾನ್ವಿ ತಹಸೀಲ್ದಾರ್ ಶಾಮೀಲಾಗಿದ್ದಾರೆಂದ ಮೇಲೆ ಕಾನೂನು ಪಾಲನೆ ಮಾಡುವವರು ಯಾರು ಈ ಕೂಡಲೆ ರಾಯಚೂರು ಜಿಲ್ಲಾಡಳಿತ ತಹಸೀಲ್ದಾರ್ ವಿರುದ್ಧ ಕ್ರಮ ಜರುಗಿಸಿ ಟೆಂಡರ್ ರದ್ದು ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ