ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದ ಪೋಲೀಸ್ ಇಲಾಖೆಯ ವಿರುದ್ಧ ಡಿ.ಎಸ್.ಎಸ್ ಜಿಲ್ಲಾ ಸಮಿತಿ ವತಿಯಿಂದ ತೀವ್ರ ಪ್ರತಿಭಟನೆ.
ಬಸವನ ಬಾಗೇವಾಡಿ ಅಕ್ಟೋಬರ್.10

ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಮಿತಿ ವತಿಯಿಂದ ಕೋಲಾರ ತಾಲೂಕಿನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 13 ದಿನಗಳಾದರು ಆರೋಪಿಗಳನ್ನು ಬಂಧಿಸದ ಪೋಲಿಸ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಡಿ ವಾಯ್ ಎಸ್ ಪಿ ಠಾಣೆಯ ಎದುರು ಗಡೆ ಭೀಮವಾದ ಕಾರ್ಯಕರ್ತರು ಪ್ರತಿಭಟನೆಗೆ ಕುಳಿತರುಸ್ವಲ್ಪ ಸಮಯದ ನಂತರ ಠಾಣೆಯ ಡಿ ವಾಯ್ ಎಸ್ ಪಿ ಮಧ್ಯಸ್ತಿಕೆವಹಿಸಿ ಆರೋಪಿಗಳನ್ನು ಎರಡು ದಿನದಲ್ಲಿ ಬಂದಿಸುತ್ತೆವೆ ಎಂದು ಭರವಸೆ ನೀಡಿದರು ನಂತರ ಪ್ರತಿಭಟನಾಕಾರರು ಅದನ್ನು ಒಪ್ಪಿ ಕೂಡಲೇ ಬಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಎಸ್ ಪಿ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಮಾತನಾಡಿದ ಜಿಲ್ಲಾ ಸಂಚಾಲಕ ಯಮನಪ್ಪ ಗುಣಕಿ ,ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತೀರುವುದು ನಾಚಿಕೆಯ ಸಂಗತಿಯಾಗಿದೆ.

ಪೋಲಿಸ ಇಲಾಖೆಯು ಮನಸ್ಸು ಮಾಡಿದರೆ 24ಘಂಟೆ ಒಳಗೆ ಆರೋಪಿಗಳನ್ನು ಬಂಧಿಸಬಹುದು ಆದರೆ ಈ ಪ್ರಕರ್ಣದಲ್ಲಿ ನಿರ್ಲಕ್ಷ್ಯ ತೋರಿದ್ದು ನೋಡಿದರೆ ರಾಜಕೀಯವರ ಕೈವಾಡ ಇದೆ ಎಂದು ಸ್ಪಷ್ಟವಾಗಿ ತಿಳಿದು ಬರುತ್ತದೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತು ಕುಳಿತಿದ್ದಾರೆ ಅವರು ನಿಷ್ಠೆಯಿಂದ ಕೆಲಸ ಮಾಡಬೇಕಾಗಿದೆ , ಸವರ್ಣಿಯರಿಂದ ಹಲ್ಲೆಗೆ ಇಡಾದ ದಲಿತರ ಬಗ್ಗೆ ಪೋಲಿಸ್ ಇಲಾಖೆಯು ಈ ನಿರ್ಲಕ್ಷ್ಯ ಭಾವನೆ ಕೈ ಬಿಡದಿದ್ದರೆ ರಾಜ್ಯ ವ್ಯಾಪಕವಾಗಿ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸುತ್ತಾ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿ ಪ್ರತಿಭಟನೆ ಹಿಂಪಡೆದರು.ಈ ಸಂದರ್ಭದಲ್ಲಿ ಜಲ್ಲಾ ಸಂಘಟನಾ ಸಂಚಾಲಕ ಎಲ್ಲಪ್ಪ ವಾಲಿಕಾರ ಯಮನೇಶ ಹಳ್ಳದಕೇರಿ ಮಾಂತೇಶ ಬಿಜಾಪೂರ ಶಿವಾಜಿ ಜಮಖಂಡಿ ಭೀಮು ಬಬಲೇಶ್ವರ ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ