ನೆಹರು ಯುವ ಕೇಂದ್ರ ದಿಂದ ಸಂವಿಧಾನ ದಿನಾಚರಣೆ.
ಮಾನ್ವಿ ನ.27

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅಖಿಲ್ ಸಿದ್ದಿಖ್ “ದೇಶದಲ್ಲಿ ಪರಸ್ಪರ ಚರ್ಚೆ, ವಿಮರ್ಶೆಗಳು ಸಂವಿಧಾನದ ತಳಹದಿ ಆರೋಗ್ಯಕರ ಚರ್ಚೆಗಳು ದೇಶದ ಒಳಿತಿಗೆ ಮೆಟ್ಟಿಲುಗಳು ಇಂತಹ ಚರ್ಚೆಗಳಲ್ಲಿ ಯುವ ಜನರು ಭಾಗವಹಿಸುವುದರ ಮೂಲಕ ಸಂವಿಧಾನದ ಮೂಲ ಆಶಯವನ್ನು ತಿಳಿಯಬಹುದು ಎಂದು ಹೇಳಿದರು.

ಮಾನ್ವಿಯ ಶಾಸಕರ ಭವನ ಸಭಾಂಗಣದಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ, ರಾಯಚೂರು, ವಂದೇ ಮಾತರಂ ಯುವ ಸಂಘ ಮದ್ಲಾಪುರ, ಪಯೋನಿಯರ್ ಸರ್ವಭಿವೃದ್ಧಿ ಬಳಗ ಮಾನವಿ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖಾಸಗಿ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಆಂಜನೇಯ ನಾಯಕ ನಸ್ಲಾಪುರ ಮಾತನಾಡಿ “ಯುವಕರು ರಾಜಕೀಯಕ್ಕೆ ಬರಬೇಕು, ಎಲ್.ಎಲ್.ಬಿ ಓದಬೇಕು, ನಮ್ಮ ದೇಶದ ಚುಕ್ಕಾಣಿ ಹಿಡಿದು ವಿನೂತನ ರೀತಿಯಲ್ಲಿ ಅಭಿವೃದ್ಧಿಯ ಆಡಳಿತ ಮಾಡಬೇಕು. ರಾಷ್ಟ್ರ ವಿಶ್ವ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವ ಸಾಧನೆ ಕಾಣಬೇಕಿದೆ” ಎಂದರು. ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಮಹ್ಮದ್ ಬೇಗ್ “ಈ ಕಾರ್ಯಕ್ರಮದ ಉದ್ದೇಶ ವಿಧ್ಯಾರ್ಥಿ ಮತ್ತು ಯುವ ಜನರಲ್ಲಿ ಆರೋಗ್ಯಕರ ಚರ್ಚಾ ಮನೋಭಾವನೆಯನ್ನು ಉತ್ತೆಜಿಸುವುದು ಮತ್ತು ಸಂವಿಧಾನದ ಮೂಲ ಆಶಯವನ್ನು ತಿಳಿಸುವಂತಾಗಿತ್ತು ಎಂದರು.

ಯುವ ಸಂಸತ್ತು, ಒಂದು ದೇಶ ಒಂದು ಚುನಾವಣೆ ವಿಷಯದ ಕುರಿತು ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಶ್ಯಾಮ ಸುಂದರ್, ದ್ವಿತೀಯ ಫಿರದೋಸ್ ಭಾನು, ತೃತೀಯ ನಾಗರಾಜ್, ಬಂದೇ ನವಾಜ್ ಸ್ಥಾನ ಪಡೆದಿರುತ್ತೆ. ನಿರೂಪಣೆ ಸಮೀರ್, ಮಹ್ಮದ್ ಹುಸೇನ್, ಸ್ವಾಗತ ಉದಯ್ ಪತ್ತಾರ್, ವೀರೇಶ್ ವಂದಿಸಿದರು ಯುವಕ-ಯುವತೀಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ