77 ನೇ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕ ಮಟ್ಟದ – ಕವನ ಸ್ಪರ್ಧೆ.
ಉಜ್ಜಿನಿ ಜು .28

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯ ಸಂಸ್ಥಾನ ಉಜ್ಜಯಿನಿ ಕನ್ನಡ ಗೆಳೆಯರ ಬಳಗ ದಿಂದ 77 ನೇ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ತಾಲ್ಲೂಕು ಮಟ್ಟದ ಕವನ ಸ್ಪರ್ಧೆ ಏರ್ಪಡಿಸಿದ್ದಾರೆ. ಸ್ಪರ್ಧೆಯ ನಿಯಮಗಳು – ಸ್ವಾತಂತ್ರ್ಯ ಹೋರಾಟಗಾರ ಕುರಿತು, ಕವನ ಸ್ವ – ರಚಿತ ವಾಗಿರಬೇಕು. ಕವನ -20 -24 ಸಾಲುಗಳ ಮಿತಿಯಲ್ಲಿರಬೇಕು ಈ ಹಿಂದೆ ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟ ವಾಗಿರಬಾರದು. ವಿಜೇತ ಐದು ಕವನಗಳಿಗೆ ನಗದು ಮತ್ತು ಪುಸ್ತಕ ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರ ನೀಡಲಾಗುವುದು. ತೀರ್ಪುಗಾರರು ಮತ್ತು ಆಯೋಜಕರ ತೀರ್ಮಾನವೇ ಅಂತಿಮ, ನಿಮ್ಮ ಕವನ ಆಗಸ್ಟ್- 10/08/2024 ರ ಒಳಗಡೆ ಕಳುಹಿಸ ಬೇಕು ಒಬ್ಬರಿಗೆ ಒಂದು ಕವನ ಕಳುಹಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಮ್ಮ ಕವನವನ್ನು ತಮ್ಮ ಶಾಲಾ ಮತ್ತು ಕಾಲೇಜು ವಿಳಾಸದೊಂದಿಗೆ ಈ ಕೆಳಕಂಡ ವಾಟ್ಸಪ್ ನಂಬರಿಗೆ-6362864776 ಕಳುಹಿಸಿ. ಎಂದು ಗುಡ್ಡಪ್ಪ.ಬಿ ಯುವ ಸಾಹಿತಿ, ಮಯ್ಯೂರ ವರ್ಮ ಪ್ರಶಸ್ತಿ ಪುರಸ್ಕೃತರು, ಆಯೋಜಕರಾದ ಇವರು ಮನವಿ ಮಾಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ.ಕೊಟ್ಟೂರು.