ನರೇಗಲ್ಲ ನಗರದಲ್ಲಿ ಉಗ್ರರ ಕೃತ್ಯ – ಖಂಡಿಸಿ ಪ್ರತಿಭಟನೆ.
ನರೇಗಲ್ ಏ.27

ಗಜೇಂದ್ರಗಡ ತಾಲೂಕಿನ ನರೇಗಲ್ ನಲ್ಲಿ ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಲಾಯಿತು ಈ ಪ್ರತಿಭಟನೆಯು ಜಾಥಾ ಮಾಡುವುದರ ಮುಖಾಂತರ ಘೋಷಣೆ ಗಳೊಂದಿಗೆ ಸಂತೆ ಬಜಾರ್ ನಲ್ಲಿರುವ ಗಣೇಶನ ಗುಡಿಯ ಆವರಣದಿಂದ ಆರಂಭವಾಗಿ ಹಾಗೆ ಮುಂದುವರೆಯುತ್ತಾ ಘೋಷಣೆ ಗಳೊಂದಿಗೆ ಹಳೆ ಬಸ್ ನಿಲ್ದಾಣದ ಮುಖಾಂತರ ಹೊಸ ಬಸ್ ನಿಲ್ದಾಣದವರೆಗೆ ಬಂದು ತಲುಪಿ ಅಲ್ಲಿ ಮಾನವ ಸರಪಳಿಯನ್ನು ನಿರ್ಮಾಣ ಮಾಡಿದರು. ನಂತರ ಉಗ್ರರ ಕೃತ್ಯ ಖಂಡಿಸಿ ಗಣ್ಯರು ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕವಾದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ ಜೀವನ ಸ್ಥಿತಿಗತಿಗಳನ್ನು ಸ್ಥಿರ ಗೊಳಿಸಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೂ ಭಯೋತ್ಪಾದನೆ ಅಕ್ರಮ ನುಸುಳು ಕೋರರ ಹಾವಳಿ ಕಡಿಮೆಯಾಗಿಲ್ಲ.

ಇತ್ತೀಚಿನ ದಿನ ಮಾನಗಳಲ್ಲಿ ಕಾಶ್ಮೀರದಲ್ಲಿ ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರ ಮೇಲೆ ದಾಳಿಗಳು ನಡೆಯುತ್ತಿವೆ. ಉಗ್ರರ ಈ ಹೇಯ ಕೃತ್ಯಕ್ಕೆ ಭಾರತವು ತಕ್ಕ ಪಾಠ ಕಲಿಸಲಿದೆ. ಹಾಗೂ ಧರ್ಮದ ಆಧಾರದ ಮೇಲೆ ಉಗ್ರರು ಹಿಂದೂಗಳನ್ನು ಗುರಿಯಾಗಿಸಿ ಕೊಂಡು ಹತ್ಯೆಗೈದಿದ್ದು ನೋವಿನ ಸಂಗತಿ. ಪ್ರಧಾನಿಗಳಾದ ನರೇಂದ್ರ ಮೋದಿಯವರು ಉಗ್ರರಿಗೆ ತಕ್ಕ ಶಾಸ್ತ್ರಿ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಭಾರತೀಯರು ಒಂದಾಗಿ ಉಗ್ರರನ್ನು ಎದುರಿಸ ಬೇಕಿದೆ. ಉಗ್ರರನ್ನು ಬೆಂಬಲಿಸುವ ಕೆಲವರಿಗೆ ಕಾಲವೇ ಉತ್ತರ ನೀಡುತ್ತದೆ ಎಂದು ಹಲವಾರು ಪ್ರಮುಖರು ಈ ವಿಷಯ ಕುರಿತು ಮಾತನಾಡಿದರು. ಈ ಪ್ರತಿಭಟನೆ ಸಮಯದಲ್ಲಿ ಎಲ್ಲಾ ಊರಿನ ಗಣ್ಯರು, ಪ್ರಮುಖರು, ಮಾಜಿ ಸೈನಿಕರು ಹಾಗೂ ಎಲ್ಲಾ ಮತ ಬಾಂಧವರು ಸೇರಿ ಈ ಪ್ರತಿಭಟನೆಯನ್ನು ನಡೆಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಸ್.ವಿ ಸಂಕನಗೌಡ್ರ ರೋಣ.ಗದಗ