ಸೂರು ಇಲ್ಲದೆ ಭಾರತ ದೇಶ ಸ್ವಾತಂತ್ರ ಪಡೆದು ಶತಮಾನದ ಹಾದಿಯಲ್ಲಿದ್ದರು ದಲಿತರ ಸ್ಥಿತಿಗತಿ ಬದಲಾಗುತ್ತಿಲ್ಲ, ಆಳುವಂತ ಸರ್ಕಾರಗಳು ಏನ್ ಮಾಡುತ್ತಿವೆ…..?
ಬಣವಿಕಲ್ಲು ಜೂನ್.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಅಂಬೇಡ್ಕರ್ ಕಾಲೋನಿಯ ನಿವಾಸಿಯಾದ ಬಸಾಪುರದ ದುರುಗಪ್ಪನ ಮಗ ದುರುಗಪ್ಪ ಹಾಗೂ ತನ್ನ ಹೆಂಡತಿ ಯಲ್ಲಮ್ಮ ಒಬ್ಬ ಮಗನು ಇದ್ದು. ಈ ದಲಿತ ಕುಟುಂಬಕ್ಕೆ ಸುಮಾರು 20 ವರ್ಷಗಳಿಂದ ಜಾಗ ಮತ್ತು ಮನೆ ಇಲ್ಲದೆ ಪಡಬಾರದ ಕಷ್ಟವನ್ನು ಅನುಭವಿಸುತ್ತ ಜೀವನ ಮಾಡಿಕೊಂಡು ಬಂದಿದ್ದೇವೆ ನಾವು ಸುಮಾರು ಬಾರಿ ಗ್ರಾಮ ಪಂಚಾಯಿತಿಗೆ ಅರ್ಜಿಗಳನ್ನು ಸಲ್ಲಿಸಿದರು. ಯಾವ ಅಧಿಕಾರಿಗಳು ನಾವು ಕೊಡುವಂತ ಅರ್ಜಿಗೆ ಕಿಮ್ಮತ್ತಿಲ್ಲ, ಹಾಗೆ ನಮ್ಮ ಗೋಳು ಕೇಳಿಸಿಕೊಳ್ಳುತಿಲ್ಲ, ಎಂದು ಯಲ್ಲಮ್ಮ ಅವರು ಕಣ್ಣೀರುಡುತ್ತಾ ತಮ್ಮ ಅಳಲನ್ನು ನಮ್ಮ ವಾಹಿನಿಗೆ ಹೇಳಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ನಮ್ಮ ಈಗ ಜೀವನ ಈ ಸಮುದಾಯ ಭವನದಲ್ಲಿ ವಾಸ ಮಾಡುತ್ತಿದ್ದೇವೆ, ಈ ವ್ಯವಸ್ಥೆಯನ್ನು ಕೆಲವಾರು ಊರಿನ ಮುಖಂಡರುಗಳು ಈ ಭವನದಲ್ಲಿ ನಮ್ಮ ಕಷ್ಟವನ್ನು ನೋಡಲಾರದೆ ವಾಸ ಇರಲಿಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.ನಾವು ಈ ಭವನದಲ್ಲಿ ಸುಮಾರು 2 ರಿಂದ 3 ತಿಂಗಳಿಂದ ವಾಸ ಮಾಡುತ್ತಿದ್ದೇವೆ. ಆದರೆ ಈ ಭವನವನ್ನು ಈಗ ಏಕಾಏಕಿಯಾಗಿ ಭವನವನ್ನು ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ, ನಾವು ಈಗ ಪ್ರಾರಂಭವಾಗಿರುವ ಮಳೆಗಾಲದಲ್ಲಿ ಎಲ್ಲಿಗೆ ಹೋಗಬೇಕು ಎಲ್ಲಿಗೆ ಅಂತಾ ನಾವು ಹೋಗಬೇಕು ಎಂದು ತಮ್ಮ ಕಣ್ಣೀರು ಹಾಕಿ ತಮ್ಮ ಮನದಾಳದ ಧರ್ಮ ಸಂಕಟವನ್ನು ಹೇಳಿ ಕೊಂಡರು.

ಈ ಸಂದರ್ಭದಲ್ಲಿ ಬಣವಿಕಲ್ಲು ಗ್ರಾಮದ ಸ್ಥಳೀಯರು ಭವನದ ಅಕ್ಕ ಪಕ್ಕದ ವೀರಶೈವ ಮಹಿಳೆಯರು ಗೌರಮ್ಮ, ನಾಗಮ್ಮ, ಅವರುಗಳು ನಿಜವಾದಂತ ನಿರ್ಗತಿಕರಿಗೆ, ಕಡು ಬಡವರಿಗೆ, ಮನೆ ಜಾಗವಿಲ್ಲದೆ ವಾಸ ಮಾಡುವಂತರಿಗೆ ಸರ್ಕಾರದವರು ಗುರುತಿಸಿ ಮನೆಗಳನ್ನು ಕೊಡಬೇಕು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು, ಅದು ಏನೇ ಇರಲಿ ಈ ದಲಿತ ಕುಟುಂಬದವರಿಗೆ ಜಾಗ ಮನೆ ಮಾನ್ಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲಿಸಿ ನ್ಯಾಯ ಕೊಡಿ ಎಂದು ಗ್ರಾಮಸ್ಥ ಮಹಿಳೆಯರ ಕೂಗಾಗಿದೆ ಎಂದು ಕೇಳಿ ಕೊಂಡಿದ್ದಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ ಕೂಡ್ಲಿಗಿ.