ಬಾಂಡ್ರಾವಿ ಗ್ರಾಮದಲ್ಲಿ 78, ಲಕ್ಷದ ಉಪ ಆರೋಗ್ಯ ಕೇಂದ್ರ ಉದ್ಘಾಟನೆ ಮಾಡಿದ – ಶಾಸಕರು.

ರಾಂಪುರ ಆ.04

ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ರಾಂಪುರದ ಗಡಿ ಭಾಗದಲ್ಲಿ ಸುತ್ತಮುತ್ತ ಬರುವಂತ ಬಾಂಡ್ ರವಿ ಗ್ರಾಮಗಳಿಗೆ ಆರೋಗ್ಯ ಉಪ ಕೇಂದ್ರ 78 ಲಕ್ಷ ವೆಚ್ಚದಲ್ಲಿ ಅನುದಾನ ಬಿಡುಗಡೆ ಮಾಡಿಸಿ ಉದ್ಘಾಟನೆ ಮಾಡಿದ ಶಾಸಕರು ಈ ಸಂದರ್ಭದಲ್ಲಿ ಶಾಸಕರ ಸಭೆಯಲ್ಲಿ ಮಾತನಾಡಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕ್ವಾಟ್ರಸ್ ಮತ್ತು ಇನ್ನಿತರ ಫರ್ನಿಚರ್ಸ್ಗಳು ಇಲ್ಲಿ ಸೌಲಭ್ಯ ದೊರಕಲಿದ್ದು ಆರೋಗ್ಯ ಅಧಿಕಾರಿಗಳು ಇಲ್ಲಿ ಇರುವುದರಿಂದ ನಾಗರಿಕರಿಗೆ ಅನುಕೂಲವಾಗಲಿ ಎಂದು ತಾಲೂಕಿನ ಗ್ರಾಮಗಳಲ್ಲಿ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಏಕೆಂದರೆ ಒಬ್ಬ ಮಗು ಶಿಕ್ಷಣದಿಂದಲೇ ಮುಂದುವರೆಯ ಬೇಕು ಮತ್ತು ಆರೋಗ್ಯದ ಬಗ್ಗೆ ಜಾಸ್ತಿ ಗಮನ ಹರಿಸುತ್ತೇನೆ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಡೆಂಗ್ಯೂ ಕಾಲಾರಾ ಯಾವುದೇ ರೋಗಗಳು ಬರದಂತೆ ನೋಡಿ ಕೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇಸ್ಮಾಯಿಲ್ ಬಾಂಡ್ರಾವಿ ರಾಮಪ್ಪ ಮುಖಂಡರುಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button