ಶಿಕ್ಷಕ ಕೊನೆಸಾಗರ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ.
ಹುನಗುಂದ ಸಪ್ಟೆಂಬರ್.6

ಪಟ್ಟಣದ ವಿದ್ಯಾನಗರ ಬಡಾವಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಎಸ್.ಕೆ.ಕೊನೆಸಾಗರ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಂಗಳವಾರ ಬಾಗಲಕೋಟೆ ಕಲಾ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ,ಶಾಸಕ ಎಚ್.ವಾಯ್.ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಜಿಪಂ ಸಿಇಒ ಶಶಿಧರ ಕುರೇರ,ಡಿಡಿಪಿಐ ಬಿ.ಕೆ.ನಂದನೂರ,ಹುನಗುಂದ ಬಿಇಒ ಜಾಸ್ಮಿನ್ ಕಿಲ್ಲೇದಾರ, ಪ್ರಾಥಮಿಕ ಶಾಲಾ ಶಿಕ್ಷಕಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೆನವರ,ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ,ಎಸ್.ಸಿ. ಎಸ್.ಟಿ. ಸಂಘದ ಜಿಲ್ಲಾಧ್ಯಕ್ಷ ಲಕ್ಷಣ ಯಂಕಂಚಿ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಭಿನಂದನೆ : ಪ್ರಶಸ್ತಿ ಪಡೆದ ಎಸ್.ಕೆ.ಕೊನೆಸಾಗರ ಅವರನ್ನು ಲೇಖಕರಾದ ಸಿದ್ದಲಿಂಗಪ್ಪ ಬೀಳಗಿ, ಡಾ.ಮುರ್ತುಜಾ ಒಂಟಿ, ಡಾ.ಶ್ರೀಶೈಲ ಗೋಲಗೊಂಡ, ವೀರಭದ್ರಯ್ಯ ಶಶಿಮಠ, ವಿಜಯಕುಮಾರ ಕುಲಕರ್ಣಿ, ಚೆನ್ನಪ್ಪ ತುಂಬಗಿ ಹಾಗೂ ದಾನೇಶ್ವರಿ ಸಾರಂಗಮಠ ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ್.ಎಂ. ಬಂಡರಗಲ್ಲ