ಸಹಕಾರಿ ಸಂಘಗಳು ಜನ ಸಾಮಾನ್ಯರ ಬದುಕಿಗೆ ಆರ್ಥಿಕ ನೆರವು ನೀಡುತ್ತಿವೆ – ನಿರಂಜನಾನಂದ ಪುರಿ ಶ್ರೀಗಳು.

ಹುನಗುಂದ ಡಿಸೆಂಬರ್.11

ಸಹಕಾರಿ ಸಂಘಗಳು ಕೆರೆ ಇದ್ದ ಹಾಗೆ,ಅವುಗಳು ಜನ ಸಾಮಾನ್ಯರ ಬದುಕಿಗೆ ಆರ್ಥಿಕ ಸಹಾಯವನ್ನು ನೀಡುವ ಆಶ್ರಯ ತಾಣವಾಗಿವೆ.ಆದರೆ ಗ್ರಾಹಕರಲ್ಲಿ ನಿಯತ್ತು ಇರಬೇಕು.ಬೇಡುವ ನಾಲಿಗೆಗೆ ನಿಯತ್ತು ಇದ್ದರೇ ಕೊಡುವ ಕೈಗಳಿಗೆ ಕೊರತೆಯಿಲ್ಲ ಎಂದು ಶ್ರೀಕ್ಷೇತ್ರ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದ ಪುರಿ ಮಹಾ ಸ್ವಾಮಿಗಳು ಹೇಳಿದರು.ಸೋಮವಾರ ಪಟ್ಟಣದ ಆಧ್ಯ ನಗರದಲ್ಲಿ ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಛೇರಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಸಂಘಗಳ ಬೆಳವಣೆಗೆಯಲ್ಲಿ ಗ್ರಾಹಕರು ಮತ್ತು ನಿರ್ದೇಶಕ ಮಂಡಳಿಯ ಪ್ರಾಮಾಣಿಕತೆ ಬಹಳ ಮುಖ್ಯ.ಕನಕದಾಸ ಬ್ಯಾಂಕನಲ್ಲಿನ ಆಡಳಿತ ಮಂಡಳಿ ಬ್ಯಾಂಕ್ ಅಭಿವೃದ್ದಿಗೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವುದರಿಂದಲೇ ಇಂದು ೮೦ ಕೋಟಿ ವ್ಯವಹಾರ ಮಾಡಲು ಮತ್ತು ಸುಸಜ್ಜಿತ ಕಟ್ಟಡವನ್ನು ಕಟ್ಟಲು ಸಾಧ್ಯವಾಗಿದೆ ಎಂದರು.ತಿಂಥಣಿ ಬ್ರಿಡ್ಜ್ನ ಕನಕ ಗುರು ಪೀಠದ ಸಿದ್ದರಾಮಾನಂದ ಪುರಿ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ ಈ ದೇಶದ ಸಂಪತ್ತು ಕೇಲವೇ ಜನರ ಸ್ವತ್ತಾಗಿದೆ.ಕೆಲವೊಂದು ಜಾತಿವಾದಿಗಳು ಈ ದೇಶದ ಎಲ್ಲರ ಹಣ ನಮ್ಮ ಟ್ರಿಜರಿಯಲ್ಲಿರಬೇಕು,ರೈತರ ಭೂಮಿ,ಅಧಿಕಾರ,ನಮ್ಮ ಜಾತಿಯವರ ಕೈಯಲ್ಲಿಯೇ ಇರಬೇಕು.ಎನ್ನುವ ರಾಕ್ಷಸ ಮನೋಭಾವನೆ ಧೋರಣೆ ವ್ಯಕ್ತಿಗಳಿದ್ದಾರೆ.ಇನ್ನು ಸರ್ಕಾರದ ಎಲ್ಲ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ.ಅವುಗಳೆಲ್ಲ ರಾಜಕಾರಣಿಗಳ ಗುಲಾಮರ ಪಾಲಾಗುತ್ತಿವೆ. ರಾಷ್ಟ್ರೀಕೃತ ಬ್ಯಾಂಕಗಳು ದಿವಾಳಿಯ ಹಂತದಲ್ಲಿವೆ ಸಹಕಾರಿ ಸಂಘಗಳ ಮೇಲೆ ರಿಸರ್ವ್ ಬ್ಯಾಂಕ್‌ನ ವಕ್ರ ದೃಷ್ಠಿ ಇದೆ ಎಂದರು.ಚಿತ್ತರಗಿ ಸಂಸ್ಥಾನ ಮಠದ ಗುರು ಮಹಾಂತ ಶ್ರೀಗಳು ಮಾತನಾಡಿ ಸಹಕಾರಿ ಸಂಘಗಳು ಬಡವರ ನೋವು ನಲುವಿನಲ್ಲಿ ಸಹಾಯ ಸಹಕಾರವನ್ನು ಮಾಡುವುದರ ಜೊತೆಗೆ ಶ್ರೀಸಾಮಾನ್ಯರ ಬ್ಯಾಂಕ್‌ಗಳಾಗಿವೆ.ಪ್ರತಿಯೊಬ್ಬರು ದುಡಿಮೆಯಿಂದ ಬಂದ ಹಣದಲ್ಲಿ ಉಳಿತಾಯ ಪದ್ದತಿಯನ್ನು ಅನುಸರಿಸ ಬೇಕು.ಗಳಿಸಿದ ಹಣವನ್ನು ಮಿತವಾಗಿ ಬಳಸಬೇಕು ಎಂದರು.ಸಂಘದ ಅಧ್ಯಕ್ಷ ವಿರೇಶ ಉಂಡೋಡಿ ಮಾತನಾಡಿ ೨೦೧೦.ರಲ್ಲಿ ೩೦೦ ಜನ ಶೇರುದಾರರು ಕೂಡಿ ಕೊಂಡು ಕೇವಲ ೩.೫ ಲಕ್ಷ ಶೇರು ಹಣದಲ್ಲಿ ಆರಂಭವಾದ ಬ್ಯಾಂಕ್ ಇಂದು ೨೫೦೦ ಸಾವಿರ ಸದಸ್ಯರನ್ನು ಹೊಂದಿ ೧.೫ ಕೋಟಿ ಶೇರು ಬಂಡವಾಳ,೨೦ ಕೋಟಿ ಠೇವಣಿ,೨೮ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ,ಕಳೆದ ಸಾಲಿನಲ್ಲಿ ೮೫ ಕೋಟಿ ವ್ಯವಹಾರವನ್ನು ಮಾಡಿದೆ.೩೨ ಲಕ್ಷ ಹಣದಲ್ಲಿ ಸ್ವಂತ ನಿವೇಶನ ಖರೀದಿ ೧.೨೦ ಕೋಟಿ ಹಣದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ.ಇದಕ್ಕೆ ಶೇರುದಾರರ ಮತ್ತು ಗ್ರಾಹಕ ಸಹಕಾರ ಮುಖ್ಯವಾಗಿದೆ.ಮನ್ಸೂರ ರೇವಣಸಿದ್ದೇಶ್ವರ ಮಹಾ ಸಂಸ್ಥಾನ ಮಠದ ಬಸವರಾಜ ದೇವರು,ನಂದವಾಡಗಿಯ ಮಹಾಂತ ಲಿಂಗ ಶಿವಾಚಾರ್ಯರು,ರಾಜುಗೌಡ ಪಾಟೀಲ,ರಾಜಕುಮಾರ ಬಾದವಾಡಗಿ ಮಾತನಾಡಿದರು.ಹುನಗುಂದ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.ಸರೂರದ ರೇವಣಸಿದ್ದಯ್ಯ ಗುರವಿನ,ಕೆಎಂಎಫ್ ನಿರ್ದೇಶಕ ಸಂಗಣ್ಣ ಹಂಡಿ,ಶೇಖರಪ್ಪ ಬಾದವಾಡಗಿ,ವಿ.ಮ.ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ,ಪಿಕೆಪಿಎಸ್ ಅಧ್ಯಕ್ಷ ದೇವು ಡಂಬಳ,ಸಂಘದ ನಿರ್ದೇಶಕರಾದ ಮಹಾಂತಗೌಡ ಪಾಟೀಲ,ನಾಗಪ್ಪ ಕಳ್ಳಿಗುಡ್ಡ,ನೀಲಪ್ಪ ತಪೇಲಿ,ಮಹಾಂತೇಶ ಮುಕ್ಕಣ್ಣನವರ,ಸಿದ್ರಾಮಪ್ಪಗೌಡ ದೇಸಾಯಿ,ವಿಠ್ಠಲ ತಿಮ್ಮಾಪೂರ,ಲಕ್ಷಿಬಾಯಿ ವಾಲೀಕಾರ,ಮಲ್ಲಿಕಾರ್ಜುನ ಡಂಬಳ,ಸಂಗಪ್ಪ ಚಿತ್ತವಾಡಗಿ, ,ಬಸವಂತಪ್ಪ ಅಂಟತಾನಿ,ರಾಮನಗೌಡ ಬೆಳ್ಳಿಹಾಳ,ಲಿಂಬಣ್ಣ ಮುಕ್ಕಣ್ಣನವರ,ಮಂಜುನಾಥ ಗೌಡರ ಸೇರಿದಂತೆ ಅನೇಕರು ಇದ್ದರು.ಮಹೇಶ ಗೋಳಪ್ಪಗೋಳ ನಿರೂಪಿಸಿ, ಮುಖ್ಯ ಕಾರ್ಯ ನಿರ್ವಾಹಕ ಭರಮಣ್ಣ ರಾಮವಾಡಗಿ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button