ರಾಜ್ಯಕ್ಕೆ ನಿರಾಶದಾಯಕ ಬಜೆಟ್ – ಡಾ, ಪ್ರಭುಗೌಡ ಲಿಂಗದಳ್ಳಿ ಚಬನೂರ.

ದೇವರ ಹಿಪ್ಪರಗಿ ಜು.24

ರಾಜ್ಯ ದಿಂದ ಸತತವಾಗಿ ಮೂರು ಬಾರಿ ಬಿಜೆಪಿ ಯಿಂದ ಹೆಚ್ಚು ಸಂಸದರು ಆಯ್ಕೆಯಾದರು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ರಾಜ್ಯಕ್ಕೆ ಕೊಡಬೇಕಾದ ಪಾಲು ಸಿಗದಿರುವುದು ಬೇಸರದ ಸಂಗತಿ, ಈ ಬಾರಿ ಕೇಂದ್ರ ಸರ್ಕಾರದ ಬಜೆಟ್ ನಿರಾಶದಾಯಕ ವಾಗಿದೆ ನೀರಾವರಿ ರಸ್ತೆ ಕೃಷಿ ಆರೋಗ್ಯ ಉದ್ಯೋಗ ಮತ್ತು ರೈಲ್ವೆ ಸೇರಿದಂತೆ ಹಲವಾರು ಬೇಡಿಕೆ ಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ, ಯುವಕರಿಗೆ ಉದ್ಯೋಗ ಮಹಿಳಾ ಸಬಲೀಕರಣಕ್ಕಾಗಿ ಹಾಗೂ ರೈತರ ಸಾಲ ಮನ್ನಾ ಭಾರತದ ಜನರು ಕೇಂದ್ರ ಸರ್ಕಾರದ ಮೇಲೆ ತುಂಬಾ ಆಶಾ ಇಟ್ಟಿದ್ದರು, ಆದರೆ ಕೇಲವು ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ, ನಮ್ಮ ರಾಜ್ಯಕ್ಕೆ ಅನುದಾನ ನೀಡದಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಯಾಗಿದೆ, ಈ ಕುರಿತು ಕರ್ನಾಟಕದ ಬಿಜೆಪಿ ಸಂಸದರು ಉತ್ತರಿಸುಬೇಕು, ಎಂದು ತಿಳಿಸಿದರು, ಡಾ,ಪ್ರಭುಗೌಡ ಲಿಂಗದಳ್ಳಿ, ಚಬನೂರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button