ಕೂಡ್ಲಿಗಿ ತಾಲೂಕಿನ ಹುಲಿಕೆರೆ ಕೆರೆಗೆ ನೀರು ಬಂದಿರುವುದರಿಂದ ರೈತರ – ಮುಖದಲ್ಲಿ ಮಂದಹಾಸ.
ಹುಲಿಕೆರೆ ಮೇ.24

ಇಡೀ ಕೂಡ್ಲಿಗಿ ತಾಲೂಕಾ ಬರಗಾಲ ದಿಂದ ತತ್ತರಿಸಿದ್ದು ಬಹುತೇಕ ಕೆರೆಗಳು ಒಣಗಿ ನೀರಿಲ್ಲದೆ ಬರಿದಾಗಿದ್ದವು ಈ ಬಾರಿ ಬಹುಬೇಗ ಮಳೆರಾಯನ ಕೃಪೆ ತೋರಿದ್ದು ಹುಲಿಕೇರಿ ಕೆರೆಗೆ ನೀರು ಬಂದಿದ್ದು ರೈತರಲ್ಲಿ ಅತೀವ ಸಂತೋಷವನ್ನುಂಟು ಮಾಡಿದೆ ಸುಮಾರು ಹತ್ತು ಹದಿನೈದು ವರ್ಷಗಳಿಂದ ನೀರಿಲ್ಲದೆ ಮಳೆ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ. ಕೆರೆಗೆ ಈ ಬಾರಿ ನೀರು ಬಂದಿದ್ದು ತುಂಬಾ ಸಂತೋಷದಾಯಕ ಎಂದು ರೈತರು ಮಾತನಾಡಿ ಕೊಳ್ಳುತ್ತಿದ್ದಾರೆ.

ಹುಲಿಕೆರೆ ಕೆರೆಗೆ ನೀರು ಬಂದರೆ ಸುತ್ತ ಮುತ್ತಲಿನ ಬೋರ್ವೆಲ್ ಗಳಿಗೆ . ಕುಡಿಯುವ ನೀರಿಗೆ. ನೀರಾವರಿಗೆ ಅನುಕೂಲವಾಗುತ್ತದೆ ಹುಲಿಕೆರೆ ಸುತ್ತಮುತ್ತಲ ರೈತರು ಮಳೆಗಾಗಿ ಪ್ರಾರ್ಥಿಸುತ್ತಾ ಕೆರೆ ತುಂಬಲಿ ಎಂದು ಅನೇಕ ದಿನಗಳಿಂದ ಕಾತರದಿಂದ ಕಾಯುತ್ತಿದ್ದರು.ನಿಂತು ಹೋಗಿದ್ದು ಕೆರೆಗೆ ನೀರು ಬರುವುದನ್ನೇ ಕಾಯುತ್ತಿದ್ದ ರೈತರಿಗೆ ಹರ್ಷವನ್ನುಂಟು ಮಾಡಿದೆ ಆ ಒಂದು ಸಂತೋಷಕ್ಕಾಗಿ ರೈತ ಮತ್ತು ರೈತ ಮಹಿಳೆಯರು ಕೆರೆಗೆ ಗಂಗೆ ಪೂಜೆ ಮಾಡುವುದರ ಮುಖಾಂತರ ಬಾಗಿಣವನ್ನು ಅರ್ಪಿಸುವುದರ ಜೊತೆಗೆ ಇನ್ನೂ ಬೇಗ ಕೆರೆ ತುಂಬಲಿ ಎಂದು ಗಂಗಾ ಮಾತೆಗೆ ಪ್ರಾರ್ಥಿಸಿದರು. ಊರಿನ ಮುಖಂಡರು ಮಹಿಳೆಯರು ಯುವಕರು ಸೇರಿದಂತೆ ಅನೇಕ ಸಾರ್ವಜನಿಕರು ಭಾಗಿಯಾಗಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.