ಕವಿ, ಪತ್ರಕರ್ತ ಚಂದ್ರಶೇಖರ ಮಾಡಲಗೇರಿ ಅವರಿಗೆ – ಕವಿ ರತ್ನ ಕಾಳಿದಾಸ ಪುರಸ್ಕಾರ.
ಬೆಂಗಳೂರು ಡಿ.25

ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಜಂಟಿಯಾಗಿ ಡಿಸೆಂಬರ್ 27 ರಂದು ಶುಕ್ರವಾರ, ಬೆಂಗಳೂರಿನ ನಯನ ಸಭಾಂಗಣದಲ್ಲಿ ಆಯೋಜಿಸಿದ 32 ನೇ. ವರ್ಷದ ವಾರ್ಷಿಕೋತ್ಸವದ ಅಖಿಲ ಭಾರತ ಕನ್ನಡ ಕವಿ ಸಮ್ಮೇಳನದಲ್ಲಿ ಕೊಡ ಮಾಡುವ ಕವಿ ರತ್ನ ಕಾಳಿದಾಸ ಪುರಸ್ಕಾರವು ಕವಿ, ಪತ್ರಕರ್ತ ಚಂದ್ರಶೇಖರ ಮಾಡಲಗೇರಿ ಅವರಿಗೆ ಲಭಿಸಿದೆ. ಖ್ಯಾತ ಸಾಹಿತಿ ಮ. ಚಿ. ಕೃಷ್ಣ ಅವರು ಸಮ್ಮೇಳನಾಧ್ಯಕ್ಷತೆ ವಹಿಸಿದ್ದು, ರಂಗ ನಿರ್ದೇಶಕ ದೇವರಾಜ್.ಡಿ. ಸಮ್ಮೇಳನ ಉದ್ಘಾಟಿಸಲಿದ್ದಾರೆ. ಖ್ಯಾತ ರಂಗ ಭೂಮಿ ಕಲಾವಿದೆ ಸುಮತಿ ಶ್ರೀ, ಸಿದ್ಧರಾಮ ಉಪ್ಪಿನ, ಬಿ.ವಿ ಸತ್ಯನಾರಾಯಣರಾವ್, ಅಶೋಕ ನರೋಡೆ ಮುಂತಾದ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಡಾ. ಜಿ.ಶಿವಣ್ಣ, ಗೋರೂರು ಪಂಕಜ, ಡಿ. ನಳಿನ, ಮಹಾಂತೇಶ ಮಲ್ಲನಗೌಡ್ರ, ಶಾಂತಾ ಕೆ. ಬಸವರಾಜ ಮುಂತಾದ ಕವಿಗಳು ವೇದಿಕೆ ಹಂಚಿ ಕೊಳ್ಳಲಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ