ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಎಂ.ಎ ಹಿರೆವಡೆಯರ ವರಿಗೆ – ಶಾಸಕ ಜಿ.ಎಸ್ ಪಾಟೀಲ ರಿಂದ ವಿಶೇಷ ಆಹ್ವಾನ.
ನಿಡಗುಂದಿ ಕೊಪ್ಪ ಫೆ 18

ನರೇಗಲ್ ಹೋಬಳಿಯ ನಿಡಗುಂದಿ ಕೊಪ್ಪ ಗ್ರಾಮದಲ್ಲಿ ಫೆಬ್ರುವರಿ 20 ರಂದು ನಡೆಯಲಿರುವ ಗಜೇಂದ್ರಗಡ ತಾಲ್ಲೂಕಿನ ಪ್ರಥಮ ತಾಲ್ಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಮಜರೆ ಕೋಡಿಕೊಪ್ಪ ಗ್ರಾಮದ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಎಂ.ಎ ಹಿರೆವಡೆಯರ ಅವರನ್ನು ರೋಣ ಶಾಸಕ ಜಿ.ಎಸ್ ಪಾಟೀಲರು ಶನಿವಾರ ಸನ್ಮಾನಿಸಿ ಸಾಹಿತ್ಯ ಸಮ್ಮೇಳನಕ್ಕೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.ಆನಂತರ ಮಾತನಾಡಿದ ಶಾಸಕ ಜಿ.ಎಸ್ ಪಾಟೀಲ ಹಿರವಡೆಯರ ಗುರುಗಳ ಜ್ಞಾನ ಅಪಾರವಾದುದು. ವಯೋ ವೃದ್ಧರೂ, ಜ್ಞಾನ ವೃದ್ಧರೂ ಆಗಿರುವ ಅವರಿಗೆ ಸಂದಿರುವ ಈ ಗೌರವ ನಿಜಕ್ಕೂ ಸ್ತುತ್ಯಾರ್ಹವಾದುದು. ಈ ಮೂಲಕ ಸರ್ವಾಧ್ಯಕ್ಷ ಸ್ಥಾನಕ್ಕೆ ಒಬ್ಬ ಅರ್ಹ ವ್ಯಕ್ತಿಯನ್ನು ಆರಿಸಿದ ಸಮಾಧಾನ ಆಯ್ಕೆ ಸಮಿತಿಗಿದೆ’ ಎಂದರು. ಕೋಡಿಕೊಪ್ಪದ ಹುಚ್ಚರಪ್ಪಜ್ಜ ನವರ ಜೀವನ ಚರಿತ್ರೆ ಸೇರಿದಂತೆ ಕನ್ನಡದ ಅನೇಕ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿರುವುದು ಸೇರಿದಂತೆ ಸಾಹಿತ್ಯ ಕೃಷಿ ಮೂಲಕ ಹೆಸರು ಪಡೆದಿದ್ದಾರೆ. ಇಂತಹ ಹಿರಿಯರ ಸಮ್ಮುಖದಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಖುಷಿ ನೀಡಿದೆ. ಸಮ್ಮೇಳನದ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಕನ್ನಡಾಭಿಮಾನಿಗಳು, ಆಜೀವ ಸದಸ್ಯರು ಎಲ್ಲರೂ ಪಾಲ್ಗೊಂಡು ಯಶಸ್ವಿ ಗೊಳಿಸಬೇಕು ಎಂದರು.ಸನ್ಮಾನ ಸೀಕರಿಸಿ ಮಾತನಾಡಿದ ಎಂ.ಎ ಹಿರೆವಡೆಯರ, ‘ನನ್ನ ಮೇಲಿನ ಅಭಿಮಾನ ಮತ್ತು ವಿಶ್ವಾಸ ದಿಂದ ತಾಲ್ಲೂಕು ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಕೃತಜ್ಞನಾಗಿರುವೆ’ ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲ್ಲೂಕ ಘಟಕದ ಅಧ್ಯಕ್ಷ ಅಮರೇಶ ಗಾಣಿಗೇರ ಮತ್ತು ಹೋಬಳಿ ಘಟಕದ ಅಧ್ಯಕ್ಷ ಎಂ ವಿ ವಿರಾಪುರ, ವಿ.ಬಿ ಸೋಮನಕಟ್ಟಿಮಠ, ನಿವೃತ್ತ ಶಿಕ್ಷಕ ಎಂ.ಎಸ್ ದಢಸೂರಮಠ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯ ಮಠ, ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಶಹರ ಘಟಕ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ವಿರೂಪಾಕ್ಷಗೌಡ ಹಿರೆಗೌಡ್ರ, ಸುನೀಲ ಬಸವರಡ್ಕರ, ಎಲ್.ಎಸ್ ಗೌರಿ, ಅಲ್ಲಾಬಕ್ತಿ ನದಾಫ್, ಬೀಚಿ ಬಳಗದಅಧ್ಯಕ್ಷ ಕೆ ಎಸ್ ಕಳಕಣ್ಣವರ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ