13 ನೇ. ವಾರ್ಡಿನಲ್ಲಿ ಚರಂಡಿಗಳನ್ನು ಸ್ವಚ್ಛ ಗೊಳಿಸದೆ ಜನರ ಆರೋಗ್ಯದ ಜೊತೆ ಪುರಸಭೆಯ ಚೆಲ್ಲಾಟ – ಸಾರ್ವಜನಿಕರಿಂದ ಆಕ್ರೋಶ.

ನರೇಗಲ್ ಮಾ.20

ಗಜೇಂದ್ರಗಡ ತಾಲೂಕಿನ ನೆರೇಗಲ್ಲಿನ ಪುರಸಭೆ ವ್ಯಾಪ್ತಿಗೆ ಬರುವ ಈಟಿಯವರ ಓಣಿ ಎಂದೇ ಸಾಮಾನ್ಯವಾಗಿ ಕರೆಯಲ್ಪಡುವ 13 ನೇ. ವಾರ್ಡ್ನಲ್ಲಿ ಸ್ವಚ್ಛತೆಯ ಮರೀಚಿಕೆ ಪರಿಕಲ್ಪನೆ ಕಂಡು ಬರುತ್ತಿದೆ ಇದೇ ವಾರ್ಡ್ನಲ್ಲಿ ಕತ್ತಿ ಮಸೂತಿ ಹಾಗೂ ಅದರ ಸುತ್ತ ಮುತ್ತಲಿರುವ ಸ್ಥಳಗಳ ಎದುರಿಗಿರುವ ಚರಂಡಿಗಳನ್ನು ಒಂದು ತಿಂಗಳಾದರೂ ಪುರಸಭೆಯವರು ಸ್ವಚ್ಛ ಗೊಳಿಸಿಲ್ಲ ಇದರಿಂದ ಅಲ್ಲಿ ಕಲುಷಿತ ನೀರು ಶೇಖರಣೆ ಗೊಂಡು ಗಬ್ಬು ವಾಸನೆ ನಾರುತ್ತಿದೆ ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವ ಸ್ಥಿತಿ ಬಂದಿದೆ. ಒಂದು ತಿಂಗಳಾದರೂ ಈ ಓಣಿಗೆ ಯಾವುದೇ ಪುರಸಭೆಯ ಅಧಿಕಾರಿಗಳಾಗಲಿ ಸ್ವಚ್ಛತೆ ಕೆಲಸ ಮಾಡುವ ವ್ಯಕ್ತಿಗಳಾಗಲಿ ಈ ಕಡೆ ಗಮನ ಹರಿಸಿಲ್ಲ ಚರಂಡಿ ಒಳಗೆ ಒಂದು ತಿಂಗಳಿಂದ ಕಸ ತುಂಬಿ ಆ ಚರಂಡಿಯ ಹೊಲಸು ನೀರು ಶೇಖರಣೆ ಗೊಂಡು ಸೊಳ್ಳೆಗಳ ಆವಾಸ ಸ್ಥಳವಾಗಿದೆ ಇದರಿಂದ ಎಲ್ಲಿ ನಮಗೆ ಸಾಂಕ್ರಾಮಿಕ ರೋಗ ಬರುವುದು ಎಂದು ಸಾರ್ವಜನಿಕರು ಆಕ್ರೋಶ ಗೊಂಡಿದ್ದಾರೆ. ಕೆಲವೊಮ್ಮೆ ಕಸ ಗುಡಿಸುವರು ಬೇಕಾ ಬಿಟ್ಟಿಯಾಗಿ ಕಸ ಗೂಡಿಸಿ ಹೋಗುತ್ತಾರೆ ಅದನ್ನು ತುಂಬಿ ಚೆಲ್ಲುವುದು ಬಿಟ್ಟು ಆ ಕಸವನ್ನು ಅದೇ ಚರಂಡಿಯಲ್ಲಿ ದಬ್ಬಿ ಹೋಗುತ್ತಾರೆ ಇದನ್ನು ಸಾರ್ವಜನಿಕರೇ ನೋಡಿರುವ ಹಲವಾರು ಉದಾಹರಣೆಗಳಿವೆ.

ಬಾಕ್ಸ್ ವಿಷಯ:-

ಪಟ್ಟಣದಲ್ಲಿರುವ ಪ್ರತಿಯೊಂದು ವಾರ್ಡ್‌ಗಳಲ್ಲಿನ ಚರಂಡಗಳನ್ನು ಸ್ವಚ್ಛತೆ ಗೊಳ್ಳಿಸುವಂತೆ ನಮ್ಮ ಪೌರ ಕಾರ್ಮಿಕರಿಗೆ ತಿಳಿಸಲಾಗಿರುತ್ತದೆ. ಯಾವ ಕಡೆ ಚರಂಡಿಗಳಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆಯೋ ಅದನ್ನು ಕೂಡಲೇ ನೀರು ಹರಿದು ಹೋಗುವಂತೆ ಸ್ವಚ್ಛತೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.

ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇತಿ,

ಬಾಕ್ಸ್ ವಿಷಯ:-

ವಾರ್ಡ್ ನಂ. 13 ರ ಈಟಿಯವರ ಓಣಿಯಲ್ಲಿ ಹಲವು ದಿನಗಳಿಂದ ಚರಂಡಿಗಳನ್ನು ಸ್ವಚ್ಛ ಗೊಳ್ಳಿಸುವಂತೆ ಪ.ಪಂ ಅಧಿಕಾರಿಗಳಿಗೆ ಹತ್ತು ಹಲವಾರು ಬಾರಿ ತಿಳಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಚರಂಡಿಗಳಲ್ಲಿ ಸೊಳ್ಳೆಗಳು ಹೆಚ್ಚಾಗುತ್ತಿರುವುದರಿಂದ ಓಣಿಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಪ್ರಾರಂಭವಾಗಿದೆ. ಕೂಡಲೇ ಪ.ಪಂ ವತಿಯಿಂದ ಸ್ವಚ್ಛತೆಗೆ ಮುಂದಾಗದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ.

ನಿವಾಸಿ ವೀರೇಶ ಬಂಗಾರಶೆಟ್ರ.

ಇದನ್ನೆಲ್ಲ ಗಮನಿಸಿದರೆ ಪುರಸಭೆಯವರು ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದು ಅಕ್ಷರ ಸಹ ಸತ್ಯವಾಗಿದೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪುರಸಭೆಯವರೇ ಹೀಗೆ ಮಾಡಿದರೆ ಜನ ಸಾಮಾನ್ಯರು ಯಾರ ಬಳಿ ತಮ್ಮ ಗೋಳನ್ನು ಹೇಳಿ ಕೊಳ್ಳಬೇಕು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಬೇಲಿಯೇ ಎದ್ದು ಹೊಲ ಮೇದಂತೆ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಸುಶೀಲ ವಾಣಿ ಪತ್ರಿಕೆಯ ವರದಿ ಕಂಡ ಮೇಲಾದರೂ ಇದಕ್ಕೆ ಪರಿಹಾರ ಸಿಗುತ್ತದೆಯೇ ಕಾಯ್ದು ನೋಡೋಣ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button