ಕ್ರಿಸ್ತನ ಸಭೆ ಉಮಳಿ ಹೊಸೂರು ವತಿಯಿಂದ ಶುದ್ದ ಕುಡಿಯುವ ನೀರಿನ ಅರವಟ್ಟಿಗೆ – ಉದ್ಘಾಟನಾ ಸಮಾರಂಭ ಜರುಗಿತು.
ನಲಗಂದಿನ್ನಿ ಮಾ.19

ಕ್ರಿಸ್ತನ ಸಭೆ ಉಮಳಿ ಹೊಸೂರು ವತಿಯಿಂದ ಶುದ್ಧ ಕುಡಿಯುವ ನೀರಿನ ಪ್ರಥಮ ವರ್ಷದ ಅರವಟ್ಟಿಗೆ ಉದ್ಘಾಟನೆ ಉದ್ಘಾಟನೆ ಭಾಷಣ ಮಾಡಿದ ಕ್ರಿಸ್ತನ ಸಭೆಗಳು ಸೇವಗಳ ಮತ್ತು ಟ್ರಸ್ಟ್ (ರಿ)ಉಮಳಿ ಹೊಸೂರು ಅಧ್ಯಕ್ಷರಾದ ದೇವರಾಜ ಮಾತನಾಡಿ ಶ್ರೀಶೈಲ ಮಲ್ಲಯ್ಯಗೆ ಪಾದಯಾತ್ರೆ ಮೂಲಕ ಹೋಗುವ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿ.
ಸ್ಥಾಪಿಸಲು ಉದ್ದೇಶ ಕಳೆದ ವರ್ಷ ಒಬ್ಬ ವ್ಯಕ್ತಿ ನೀರು ನೀರು ಎನ್ನುತ್ತಾ ಚಿಕ್ಕಟ್ನೇಕಲ್ ಗ್ರಾಮ ಅಡವಿಯ ಹತ್ತಿರ ಮರಣ ಹೊಂದಿದ ಆ ಒಂದು ಮರಣ ನಮಗೆ ತುಂಬಾ ಬಾಧೆ ಆಯಿತು. ಅದಕ್ಕೆ ಈ ವರ್ಷ ನಾವು ಮನುಷ್ಯನ ಪ್ರಾಣ ಬಹಳ ಮುಖ್ಯವಾದದ್ದು ಆ ಪ್ರಾಣಕ್ಕೆ ನೀರು ಬೇಕು ಅದಕ್ಕೆ ನೀರಿನಿಂದ ಯಾರೂ ಸಾಯಿ ಬಾರದು ಸುರಕ್ಷಿತವಾಗಿ ಹೋಗಬೇಕು ಅಂತ ಹೇಳಿ ಆ ಭಕ್ತಾದಿಗಳಿಗೆ ಬಿಸ್ಕೇಟು ಕೊಡುತ್ತ ದೈವತ್ವದ ಬಗ್ಗೆ ಆಸಕ್ತಿ ಹೊಂದಿದವರಿಗೆ ಹೊಸ ಒಡಂಬಡಿಕೆ ಬೈಬಲ್ ವಿತರಣೆ.
ಹಾಗೂ ಕರ ಪತ್ರಿಕೆಗಳು ಹಂಚುವ ಮೂಲಕ ಮನುಷ್ಯನ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು ಒಳ್ಳೆಯ ಬಾಂಧವ್ಯವನ್ನ ಸಂಪಾದಿಸಿ ಕೊಳ್ಳಲು ಪಾಪದ ಜೀವಿತವನ್ನು ಬಿಟ್ಟು ಶುದ್ಧ ಹೃದಯವುಳ್ಳವರಾಗಿ ಜೀವಿಸಲಿ ಎಂದು ನಾವು ಈ ಚಿಕ್ಕ ಸೇವೆಯನ್ನು ನಮ್ಮ ಟ್ರಸ್ಟ್ ಮೂಲಕ ಸೇವೆ ಸಲ್ಲಿಸಲಾಗಿದೆ. ಯೇಸು ಕ್ರಿಸ್ತರು ಹೇಳಿದ ಮಾತು ನಿನ್ನಂತೆ ನಿನ್ನ ನೆರೆಯವನನ್ನು ಪ್ರೀತಿಸು ಅಂದನು ಹಾಗೂ ಸಮರ್ಯದ ಬಾವಿಯ ಬಳಿಯಲ್ಲಿ ಸ್ರೀ ಜೊತೆ ಮಾತನಾಡಿದ ಯೇಸು ಅಮ್ಮ ನನಗೆ ಕುಡಿಯುವುದಕ್ಕೆ ನೀರು ಕೊಡು ಅಂದನು ಆಕೆ ಕೊಟ್ಟಳು.
ಯೇಸು ಹೇಳಿದ ಮಾತು ಅಮ್ಮ ನಾನು ಕೊಡುವ ನೀರು ನೀನು ಕುಡಿದರೆ ಎಂದಿಗೂ ನೀರಡಿಕೆ ಆಗುವುದಿಲ್ಲ ಅಂದನು ಅದರ ಅರ್ಥ ದೇಹಕ್ಕೆ ಬೇಕಾಗಿರುವಂತ ಈ ನೀರು ಎಷ್ಟು ಪ್ರಾಮುಖ್ಯವಿದೆಯೋ ಅದರಂತೆ ಆತ್ಮಕ್ಕೆ ಬೇಕಾಗಿರುವಂತ ಜೀವ ಜಲ ನೀರು ಬಹಳ ಪ್ರಾಮುಖ್ಯ ಅದು ಯಾವುದೆಂದರೆ ಯೇಸು ಕ್ರಿಸ್ತನ ಮಾತುಗಳು ಆತ್ಮಕ್ಕೆ ಅಂಟಿ ಕೊಂಡಿರುವ ಪಾಪವು ಶುದ್ಧವಾಗ ಬೇಕಾದರೆ ಯೇಸು ಕ್ರಿಸ್ತನ ಮಾತುಗಳನ್ನು ಕೇಳಿ ಪಾಪದ ಜೀವಿತವನ್ನು ದೀಕ್ಷಾ ಸ್ನಾನ ಮೂಲಕ ತೊರೆದು ಎಲ್ಲರೂ ರಕ್ಷಣಾ ಹೊಂದಿ ಸತ್ಯದ ಜ್ಞಾನಕ್ಕೆ ಸೇರ ಬೇಕೆಂಬುದೇ ದೇವರ ಚಿತ್ತವಾಗಿದೆ.
ಅದಕ್ಕಾಗಿ ಎಲ್ಲರೂ ಸತ್ಯವನ್ನು ತಿಳಿದುಕೊಂಡು ಸತ್ಯದಲ್ಲಿ ನಡೆಯಬೇಕೆಂದು ಸತ್ಯ ನಮ್ಮನ್ನು ಬಿಡುಗಡೆ ಮಾಡುತ್ತದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜ ಸೇವಕ ಸರ್ವಧರ್ಮ ವೆಲ್ ಫಾರ್ ಟ್ರಸ್ಟ್ ಹನುಮಂತ ಕೋಟೆ ಅಬ್ರಹಾಮ್ ದೈವ ಸೇವಕರು ಸುರೇಶ ಟ್ರಸ್ಟ್ ಉಪಾಧ್ಯಕ್ಷರು ಖಜಂಚಿ ಕುಮಾರ ದಿವ್ಯ ಅಯ್ಯಪ್ಪ ಪ್ರವೀಣ್ ಕುಮಾರ್ ಇನ್ನೂ ಇತರರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ