ಮಾನ್ವಿ ಪಟ್ಟಣದ ಕಸದ ತೊಟ್ಟಿಗಳೇ ಇಲ್ಲ, ಅಧ್ಯಕ್ಷರ 16 ನೇ. ವಾರ್ಡ್ನಲ್ಲಿ – ಸ್ವಚ್ಛತೆ ಮಾಯ!
ಮಾನ್ವಿ ಮಾ.18

ನಗರದ ಹೃದಯ ಭಾಗದಲ್ಲಿರುವ ಪುರಸಭೆಯ ಅಧ್ಯಕ್ಷರ ಲಕ್ಷ್ಮಿ ವೀರೇಶ್ ತಮ್ಮ ವಾರ್ಡ್ನಲ್ಲಿ ಸ್ವಚ್ಛತೆ ಮಾಯವಾಗಿದೆ. ರಸ್ತೆ ಬದಿಯಲ್ಲಿ ಕಸದ ರಾಶಿಗಳು ತುಂಬಿದ್ದು, ದುರ್ನಾತ ಬೀರುತ್ತಿವೆ. ಕಸದ ತೊಟ್ಟಿಗಳ ಕೊರತೆ ಮತ್ತು ಕಸ ವಿಲೇವಾರಿ ವಾಹನಗಳ ಅನಿಯಮಿತ ಸಂಚಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸದ ರಾಶಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಡೆಂಗ್ಯೂ, ಮಲೇರಿಯಾ ಮುಂತಾದ ಖಾಯಿಲೆಗಳು ಹರಡುವ ಸಾಧ್ಯತೆ ಇದ್ದು, ಈ ಬಗ್ಗೆ ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು. ಲಕ್ಷ್ಮಿ ವೀರೇಶ್ ಅಧ್ಯಕ್ಷರ ನಿರ್ಲಕ್ಷ್ಯವೇ ಕಾರಣಪುರಸಭೆ ಅಧ್ಯಕ್ಷರ ವಾರ್ಡ್ನಲ್ಲೇ ಈ ರೀತಿಯ ಪರಿಸ್ಥಿತಿ ಇರುವುದು ವಿಷಾದನೀಯ.

ಅಧ್ಯಕ್ಷರು ತಮ್ಮ ವಾರ್ಡ್ನ ಬಗ್ಗೆ ಗಮನ ಹರಿಸುತ್ತಿಲ್ಲ ಇನ್ನೂ ಬೇರೆ ಕಡೆಯ ಪರಿಸ್ಥಿತಿ ಏನಾಗಿರಬಹುದು ಕಸದ ಗಾಡಿ ಎಂಟು ಹತ್ತು ದಿನಕೊಮ್ಮೆ ಬರುತ್ತಿದೆ ಜನರು ಕಸವನ್ನು ತಮ್ಮ ಮನೆಯಲ್ಲಿ ಇಟ್ಟು ಕೊಂಡಿದ್ದಾರೆ ದುರ್ನಾತ ಹುಳಗಳು ಹುಟ್ಟುತ್ತಿರುವುದು ಕಾಣುತ್ತಿದೆ ಅಧ್ಯಕ್ಷರ ಒಂದು ವೇಳೆ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜನರು ನಿಮ್ಮ ಮನೆಯಲ್ಲೇ ಕಸವನ್ನು ಹಾಕುವುದು ಖಂಡಿತ.ಪುರಸಭೆ ಅಧ್ಯಕ್ಷ ಲಕ್ಷ್ಮಿ ವೀರೇಶ್ ಕೂಡಲೇ ಎಚ್ಚೆತ್ತು ಕೊಂಡು ಕಸ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸ ಬೇಕು. ಕಸದ ತೊಟ್ಟಿಗಳನ್ನು ಹೆಚ್ಚಿಸಬೇಕು ಮತ್ತು ಕಸ ವಿಲೇವಾರಿ ವಾಹನಗಳನ್ನು ನಿಯಮಿತವಾಗಿ ಓಡಿಸ ಬೇಕೆಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ