ಎ.ಪಿ.ಎಂ.ಸಿ ನಾಮ ನಿರ್ದೇಶನ ಸದಸ್ಯರ ಆಯ್ಕೆಯಲ್ಲಿ – ಹಿರಿಯ ಕಾಂಗ್ರೆಸ್ ಮುಖಂಡರ ಅಸಮಾಧಾನ.

ಕೊಟ್ಟೂರು ನ. 28

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕರ್ನಾಟಕ ಸರ್ಕಾರ ನಾಮ ನಿರ್ದೇಶಕರ ಆಯ್ಕೆಯಲ್ಲಿ ತೂಲಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಒಂದೇ ಕುಟುಂಬಕ್ಕೆ ಎರಡು ಸದಸ್ಯತ್ವ ನೀಡಿದ್ದು. ಈ ಭಾಗದ ಕಾಂಗ್ರೆಸ್ ಹಿರಿಯ ಮುಖಂಡರಾದ ಇಮಾಮ್ ಸಾಹೇಬ್, ಹೆಚ್ ಜಿ ರಾಮನಗೌಡ ಹನುಮನಹಳ್ಳಿ, ಹರಕನಾಳ ಹಾಲೇಶಪ್ಪ ಹನುಮನಹಳ್ಳಿ, ಉಮೇಶ್ ತೂಲಹಳ್ಳಿ, ಚಿದಾನಂದಪ್ಪ ನಿವೃತ್ತಿ ಶಿಕ್ಷಕರು ಜೋಳದ ಕೂಡ್ಲಿಗಿ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ತುಂಬಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರದ ಡಾ, ಎನ್‌.ಟಿ ಶ್ರೀನಿವಾಸ್ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಅಲ್ಪಾವಧಿಯಲ್ಲಿ ಜನರ ಅತಿ ಹೆಚ್ಚು ಪ್ರೀತಿ ಗಳಿಸುವಲ್ಲಿ ಯಶಸ್ಸು ಕಂಡರೂ ಈ ಭಾಗದ ಅಭಿವೃದ್ಧಿ ಮತ್ತು ಕೆಲ ಕಾಂಗ್ರೆಸ್ ಮುಖಂಡರಿಗೆ ಅನ್ಯಾಯವಾಗಿದೆ ಒಂದೇ ಕುಟುಂಬಕ್ಕೆ ಎಪಿಎಂಸಿಯ ಎರಡು ಸದಸ್ಯತ್ವ ನೀಡುವ ಮೊದಲು ವಿಚಾರಣೆ ಮಾಡ ಬೇಕಾಗಿದೆಯಂತೆ ಇನ್ನ ಮುಂದಿನ ದಿನಗಳಲ್ಲಾದರೂ ತಾಲೂಕು ಪಂಚಾಯತಿಯ ತೂಲಹಳ್ಳಿ ಕ್ಷೇತ್ರಕ್ಕೆ ಹೆಚ್ಚಿನ ಗಮನ ವಹಿಸಬೇಕು. ಹನುಮನಹಳ್ಳಿಯು ಕೂಡ್ಲಿಗಿ ಕ್ಷೇತ್ರದ ಕೊನೇ ಭಾಗವಾದರೂ ಅತಿ ಹೆಚ್ಚು ಮತಗಳನ್ನು ನೀಡುವುದರ ಮೂಲಕ ಸಹಕಾರಿಯಾಗಿದೆ ಎಂದು ಅಸಮಾನದಿಂದ ಬೇಸರ ವ್ಯಕ್ತಪಡಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button