ನಿಧನ ವಾರ್ತೆ:ಪೂಜಾರಿ ರೇಣುಕಮ್ಮ ನಿಧನ.

ಕೂಡ್ಲಿಗಿ ಆಗಷ್ಟ. 2

ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ14ನೇ ವಾರ್ಡ ವಾಸಿಯಾದ ಡಾ. ಬಿ. ಆರ್. ಅಂಬೇಡ್ಕರ್ ನಗರದ ಪೂಜಾರಿ ರೇಣುಕಮ್ಮ ರವರು (54) ಇವರು ಅನಾರೋಗ್ಯ ದಿಂದ ಕೆಲವು ದಿನಗಳಿಂದ ಬಳಲುತ್ತಿದ್ದು ಮಂಗಳವಾರ ರಂದು ಸಾಯಂಕಾಲ 6.30 ರ ಸಮಯಲ್ಲಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ. ಇವರಿಗೆ 3 ಜನ ಗಂಡು 2 ಜನ ಹೆಣ್ಣು ಮಕ್ಕಳಿದ್ದು ಇವರ ಹಿರಿಯ ಮಗನಾದ ಪಿ. ಸಂತೋಷ ಕುಮಾರ್ ಇವರು ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷರಾಗಿದ್ದು ಇವರ ತಾಯಿಯಾದ ಪೂಜಾರಿ ರೇಣುಕಮ್ಮ ಇವರನ್ನು ಸಮುದಾಯದ ಹಿರಿಯರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:-* ಮೃತರಾದ ಪೂಜಾರಿ ರೇಣುಕಮ್ಮ ಇವರ ಅಂತ್ಯಕ್ರಿಯೆ ಆಗಸ್ಟ್ 2ರಂದು ಮಧ್ಯಾಹ್ನ 1 ಗಂಟೆಗೆ, ಪಟ್ಟಣದ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:-* ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಸಮಾಜದವರು, ಹಾಗೂ ವಿವಿಧ ಸಮಾಜದವರು ಮುಖಂಡರಗಳು ಹಾಗೂ ಪೂಜಾರಿ ವಂಶದವರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕರು ಹಾಗೂ ಗಣ್ಯರು, ನಿಧನರಾದ ಪೂಜಾರಿ ರೇಣುಕಮ್ಮ ರವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button