ಅಸ್ಪೃಶ್ಯತಾ ನಿವಾರಣೆಗೆ – ಜಾಗೃತಿ ಹೆಜ್ಜೆಗಳು…..!

ಇಂಡಿ ಫೆ.01

ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರವು ಸಮಾಜದಲ್ಲಿನ ಅಸ್ಪೃಶ್ಯತಾ ಆಚರಣೆಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಪರಿಶಿಷ್ಟ ಜಾತಿಯ ಸಬಲೀಕರಣಕ್ಕಾಗಿ ಇಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೋಳ್ಳಿ. ಝಳಕಿ. ನದ್ರಾಳ ಧೂಳಖೇಡ . ಹಲಸಂಗಿ. ಗ್ರಾಮಗಳಲ್ಲಿ ಅಸ್ಪೃಶ್ಯತಾ ನಿವಾರಣ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಪ್ರಬುದ್ಧತೆಯ ಭಾವನೆ ಮೂಡಿಸಿದೆ.

ಈ ಕಾರ್ಯಕ್ರಮದಲ್ಲಿ ಇಂಡಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಉಮೇಶ ಲಮಾಣಿ ಮತ್ತು ತಾಲೂಕು ವಿಪ ವಿಭಾಗ ದೌರ್ಜನ್ಯ ಸಮೀತಿ ಅಧ್ಯಕ್ಷ ಶಿವಾನಂದ ಮುರಮಾನ ಮತ್ತು ದಲಿತ ಮುಖಂಡ ಪಿರಪ್ಪ ಕಟ್ಟೀಮನಿ ಅವರ ನೇತೃತ್ವದಲ್ಲಿ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮ ನಿಮಿತ್ತ ಬೀದಿ ನಾಟಕ ಹಾಗೂ ಕರ ಪತ್ರಗಳ ಮೂಲಕ ಇಂದು ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮವು ಗ್ರಾಮ ಸೇವಾ ಟ್ರಸ್ಟ್ (ರಿ) ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಇದರ ಅಧ್ಯಕ್ಷರಾದ ಸತೀಶ್ ಚೌಹಾಣ್ (ಇಂಡಿ) ಇವರ ಸಹಯೋಗದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಕಾರ್ಯಕ್ರಮವು ಸ್ಥಳೀಯರ ಮನ್ನಣೆಗೆ ಹಾಗೂ ಆಕರ್ಷಣೆಗೆ ಸಾಕ್ಷಿಯಾಗಿದೆ ಎಂದು ದಲಿತ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಜಾಗೃತಿ ಕಾರ್ಯಕ್ರಮದಲ್ಲಿ ಬೀದಿ ನಾಟಕ ಮಾಡಿ ಯಶಸ್ವಿ ಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದವರು ಸತೀಶ್ Chavan (ಇಂಡಿ) ವಿನೋದ್ ಇಂಡಿ ಗೋವಿಂದ ಬಂಡಿಹಳ್ಳಿ (ಹೊಸಪೇಟೆ) ಹನುಮಯ್ಯ ವೆಂಕಟಾಪುರ (ಹೊಸಪೇಟೆ) ಮಮತಮ್ಮ ತುಮಕೂರು ಹಿರಣ್ಯ ವಿಜಯಪುರ ಮಂಜುನಾಥ್ ತುಮಕೂರು ಪೂರ್ಣಿಮಾ ಬೈಲಹೊಂಗಲ ಉಮೇಶ್ ಲಮಾಣಿ ಹೀಗೆ ಸಾರ್ವಜನಿಕರು ಕೂಡ ಭಾಗವಹಿಸಿದ್ದರು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button