ವಿವಿಧ ಬೇಡಿಕೆ ಈಡೇರಿಸುವಂತೆ ಸರಕಾರದ ವಿರುದ್ಧ – ಪೌರ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ.

ರೋಣ ಮೇ.27

ರಾಜ್ಯದಲ್ಲಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿಹಿಸುವ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸದೆ ಇರುವ ಸರಕಾರದ ವಿರುದ್ಧ ರೋಣ ನಗರದ ಪೌರ ನೌಕರರು ಕಚೇರಿಯ ಆವರಣದಲ್ಲಿ ಮೇ 27 ಮಂಗಳವಾರ ರಂದು ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಪ್ರಾರಂಭ ಮಾಡಿದರು.ತಮ್ಮ ಜೀವದ ಹಂಗನ್ನು ತೊರೆದು ಸಮಾಜದಲ್ಲಿ ಉತ್ತಮ ಪರಿಸರ ನಿರ್ಮಾಣ ಆಗುವಂತೆ ಸ್ವಚ್ಛತಾ ಸೇನಾನಿಯಾಗಿ ಕಾರ್ಯ ನಿರ್ವಾಹಿಸುವ ಪೌರ ನೌಕರರರಿಗೆ ಸರಕಾರ ಕಳೆದ 6 ತಿಂಗಳ ಯಿಂದ ವೇತನಯಿಲ್ಲದೆ ಬದುಕು ನೆಡೆಸುವುದು ಕಷ್ಟವಾಗಿದ್ದು, ವಿವಿಧ ಬೇಡಿಕೆಯನ್ನು ಸರಕಾರ ಈಡೇರಸದೆ ಪೌರ ನೌಕರರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಪ್ರತಿಭಟನೆ ವೇಳೆ ನೌಕರ ಮಾರುತಿ ಛಲವಾದಿ ಮಾತನಾಡಿ ಪ್ರತಿಭಟನೆ ವೇಳೆ ಸುಮಾರು ವರ್ಷಗಳಿಂದ ನಾವು ಪುರ ಸಭೆಯ ಪೌರ ಕಾರ್ಮಿಕರಾಗಿ, ಹೊರ ಗುತ್ತಿಗೆಯ ನೌಕರರಾಗಿ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ನಮ್ಮ ಬೇಡಿಕೆಗಳಾದ ರಾಜ್ಯದ ಎಲ್ಲಾ ನಗರ, ಸ್ಥಳೀಯ, ಸಂಸ್ಥೆಯ ನೌಕರರ ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ರಾಜ್ಯದ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು, ಚಾಲಕರು, ಲೋರ್ಡನ್, ಕ್ಲೀನರ್ಸ್, ಗಾರ್ಡನ್ ಶಾನಿಟರಿ ಸೂಪರವೈಜರ್, ಕಂಪ್ಯೂಟರ್ ಆಪರೇಟರ್, ಯುಜಿಡಿ ಸಹಾಯಕರು, ಸೇರಿದಂತೆ ವಿವಿಧ ವೃಂದದ ಹೊರ ಗುತ್ತಿಗೆ ಕಾರ್ಮಿಕರನ್ನು ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಗೆ ಒಳಪಡಿಸುವುದು, ದಿನ ಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು. ವಿಶೇಷ ನೇಮಕಾತಿ ಅಡಿ ಖಾಯಂ ಗೊಂಡ ನೌಕರರಿಗೆ ಎಸ್.ಎಫ್.ಸಿ ಅನುದಾನ ದಿಂದ ವೇತನ ನೀಡುವುದು ನಮ್ಮ ಬೇಡಿಕೆಯಾಗಿದ್ದು. ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ನಾವು ಇಂದು ಮಂಗಳವಾರ (ಮೇ.27) ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಡುತಿದ್ದೇವೆ ಎಂದು ಹೇಳಿದರು. ನಮ್ಮ ಬೇಡಿಕೆ ಈಡೇರುವವರಿಗೆ ಅನಿರ್ಧಷ್ಟಾವಧಿ ಮುಷ್ಕರ ಕೈ ಬೀಡುವುದಿಲ್ಲ ಎಂದು ನಗರದ ಪುರ ಸಭೆಯ ಪೌರ ನೌಕರರು ಪಟ್ಟು ಹಿಡಿದಿದ್ದಾರೆ . ಈ ಪೌರ ಕಾರ್ಮಿಕರ ಅನಿರ್ಧಷ್ಟಾವಧಿ ಮುಷ್ಕರ ಪ್ರತಿಭಟನೆ ಇನ್ನೂ ಯಾವ ಅಂತಕ್ಕೆ ಹೋಗುತ್ತೆ ಅನ್ನೋದನ್ನ ಕಾಯ್ದು ನೋಡೋಣ. ಈ ಸಂಧರ್ಭದಲ್ಲಿ. ಸಂತೋಷ ಜಾವನ್. ಪರೀದ ಸರವರ್. ಎನ್.ಬಿ ಬಂಡಿ. ಪರಸಪ್ಪ ಚಲವಾದಿ. ಶಿವು ಕಿರೇಸೊರ. ಶೇಖಪ್ಪ ನವಲಗುಂದ. ಬಸವರಾಜ ಜೋಗನ್ನವರ. ಎಂ.ಎ ಮುಲ್ಲಾ. ಈರಪ್ಪ ಪಲ್ಲೇದ. ರವಿ. ಜೋಗನ್ನವರ. ಗಂಗವ್ವ ಹಲಗಿ. ಶಿದ್ದವ್ವ ದೊಡ್ಡಮನಿ. ಪ್ರೇಮವ್ವ ದೊಡ್ಡಮನಿ. ಲಕ್ಷ್ಮಣ ಹೊಸಮನಿ. ಸೇರಿದಂತೆ ಇನ್ನೂ ಅನೇಕರು ಪಾಲ್ಗೊಂಡಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button