ನಕಲಿ ಎಸ್/ಸಿ ಪ್ರಮಾಣ ಪತ್ರ ವಿತರಣೆ – ಅಧಿಕಾರ ದುರುಪಯೋಗ ಆರೋಪ.
ಐಗಳಿ ಫೆ.15

ಹಂಪವ್ವ ಶಿಂಗೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಹಿಳೆಗೆ ಅಧಿಕಾರಿಗಳು ಕೇವಲ 10 ಸಾವಿರ ಆದಾಯ ಪ್ರಮಾಣ ಪತ್ರ ನೀಡುವುದಲ್ಲದೆ. ವಿನೊದ ಮಹಾದೇವ ಶಿಂಗೆ ಹೆಸರಿನ ವ್ಯಕ್ತಿಗೆ ಎಸ್/ಸಿ ಪ್ರಮಾಣ ಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿ ಕೊಂಡಿರುವ ಆರೋಪ ಕೇಳಿ ಬಂದಿದೆ.
ಅಥಣಿ ತಾಲೂಕಿನ ಐಗಳಿ ಮೂಲದ ವಿನೋದ ಮಹಾದೇವ ಶಿಂಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಕೊಂಡಿದ್ದು. ಕಳೆದ ಹಲವು ವರ್ಷಗಳಿಂದ ಮೀಸಲಾತಿ ಪಡೆದಿದ್ದಾರೆ. ಇದರಿಂದ ನಮ್ಮ ದಲಿತ ಸಮುದಾಯಕ್ಕೆ ಅಧಿಕಾರಿಗಳು ಹಾಗೂ ವಿನೋದ ಅನ್ಯಾಯ ಮಾಡಿದ್ದಾರೆ ಎಂದು ದಲಿತ ಮುಖಂಡ ಸಂದೀಪ ಕಾಂಬಳೆ ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಕುಲಂಕುಷವಾಗಿ ಪರೀಶೀಲಿಸಿ, ಪರಿಗಣಿಸಿ ದಲಿತ ಸಮುದಾಯಕ್ಕೆ ನ್ಯಾಯ ನೀಡುವಂತೆ ಮನವಿ ಮಾಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಪೀರು.ನಂದೇಶ್ವರ.ಅಥಣಿ