ದಲಿತ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣ ದಾಖಲಿಸುವಲ್ಲಿ ವಿಳಂಬ ಯತ್ನಕ್ಕೆ – ಭೀಮ್ ಆರ್ಮಿ ಕರ್ನಾಟಕ ಏಕ್ತ ಮಿಷನ್ ದಿಂದ ಖಂಡನೆ.

ತಳ್ಳಳ್ಳಿ ಫೆ.15

ದಲಿತ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದರ ಬಗ್ಗೆ ಕೆಂಭಾವಿ ಠಾಣಾದಲ್ಲಿ ಅಪರಾಧ ಸಂಖ್ಯೆ 0019/2025 ಪ್ರಕರಣ ದಾಖಲಾದರೂ ಕೂಡ ಇಲ್ಲಿವರೆಗೂ ಆರೋಪಿಯನ್ನು ಬಂಧಿಸಿಲ್ಲ ಪೊಲೀಸ್. ಸುರಪುರ ತಾಲೂಕ ತಳ್ಳಳ್ಳಿ ಗ್ರಾಮದ ದಲಿತ ಮಹಿಳೆಯಾದ ಶ್ರೀಮತಿ ಅಯ್ಯಮ್ಮ ಗಂಡ ಬಸವರಾಜ ದೊಡ್ಡಮನಿ ಇವರು ತಳ್ಳಳ್ಳಿ ಗ್ರಾಮದ ಸಂಗಣ್ಣ ತಂದೆ ಶಾಂತಪ್ಪ ಸಾತಿಹಾಳ ಜಾತಿ ಬೇಡರ ಇತನ ಊರು ತಳ್ಳಳ್ಳಿ ಇತನು ದಲಿತ ಮಹಿಳೆ ಮೇಲೆ ಬಲವಂತ ದಿಂದ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ ಬಗ್ಗೆ ಕೆಂಭಾವಿ ಪೊಲೀಸ್ ಠಾಣಾಯಲ್ಲಿ ಗುನ್ನಾ ಸಂಖ್ಯೆ 0016/2025 ದಿನಾಂಕ. 20/01/2025 ರಂದು ಪ್ರಕರಣ ದಾಖಲಾಗಿರುತ್ತದೆ ಪ್ರಕರಣ ದಾಖಲಾಗಿ ಸುಮಾರು ಒಂದು ತಿಂಗಳಾದರೂ ಆರೋಪಿಯನ್ನು ಬಂಧಿಸಿರುವುದಿಲ್ಲ ಸದರಿ ಆರೋಪಿ ಗ್ರಾಮದಲ್ಲಿ ರಾಜಾ ರೋಷವಾಗಿ ತಿರುಗಾಡಿ ಅತ್ಯಾಚಾರಕ್ಕೊಳಗಾದ ಕುಟುಂಬದವರು ಭಯ ಭೀತಿಯಲ್ಲಿ ಬದುಕುತ್ತಿದ್ದಾರೆ ಆದರೆ ಕೆಂಭಾವಿ ಠಾಣಾಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ಉಪಲರಾಗಿರುತ್ತಾರೆ. ಇದನ್ನು ನೋಡಿದರೆ ಆರೋಪಿಯ ಆಮಿಷಕ್ಕೆ ಗೊಳಗಾಗಿ ಆರೋಪಿಯನ್ನು ಎದ್ದು ಕಾಣುವಂತಿದೆ. ಆದ್ದರಿಂದ ತಾವುಗಳು ತಕ್ಷಣವೇ ಸದರಿ ಆರೋಪಿಯನ್ನು ಬಂಧಿಸಿ ಅತ್ಯಾಚಾರ ಕ್ಕೊಳಗಾದ ದಲಿತ ಮಹಿಳೆಯ ಕುಟುಂಬಕ್ಕೆ ರಕ್ಷಣೆ ನ್ಯಾಯ ದೊರಕಿಸಿ ಕೊಡಬೇಕು. ಒಂದು ವೇಳೆ ವಿಳಂಬವಾದರೆ ತಮ್ಮ ಕಚೇರಿಯ ಎದುರಲ್ಲಿ ನೊಂದ ಮಹಿಳೆಯ ರೊಂದಿಗೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಭೀಮ್ ಆರ್ಮಿ ಕರ್ನಾಟಕ ಏಕ್ತ ಮಿಷನ್ ಹುಣಸಿಗಿ ತಾಲೂಕು ಅಧ್ಯಕ್ಷ ಸಿದ್ದಪ್ಪ ದೊಡ್ಡಮನಿ ಹಾಗೂ ಸುರಪುರ ತಾಲೂಕು ಅಧ್ಯಕ್ಷ ಶರಣಪ್ಪ ಎಂ ಹೊಸಮನಿ. ಸಂಘಟನೆಯಿಂದ ಎಚ್ಚರಿಕೆ ಮನವಿ ಆಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಲಗಪ್ಪ. ನಂದಪ್ಪ.ಹರಿಜನ.ರಾಜವಳ.ಹುಣಸಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button