ಬದ್ದಿ ರೇಖಾ ರಮೇಶ್ ರವರು ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ.

ಕೊಟ್ಟೂರು ಸ.01

31/೦8/2024 ರಂದು ಶನಿವಾರ ಪ/ಜಾತಿಯ ಮಹಿಳೆ ಅಧ್ಯಕ್ಷರ ಸ್ಥಾನಕ್ಕೆ ನಿಗಧಿ ಯಾಗಿದ್ದದರಿಂದ, ಶ್ರೀ ಮತಿ ಬದ್ದಿ ರೇಖಾ ರಮೇಶ್ ರವರು ಕಾಂಗ್ರೆಸ್ ಬೆಂಬಲಿತ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ವರ್ಗ ಬಿಜೆಪಿ ಸಿದ್ಧಯ್ಯ ನಾಮಪತ್ರ ಸಲ್ಲಿಸಿದರಿಂದ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ, ಚುನಾವಣೆ ಅಧಿಕಾರಿಯಾದ ಜಿ ಕೆ ಅಮರೇಶ ರವರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬದ್ದಿ ರೇಖಾ ರಮೇಶ್ ರವರು ಮಾತನಾಡಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಪಟ್ಟಣ ಪಂಚಾಯ್ತಿಯ ಚುನಾವಣೆಯಲ್ಲಿ ನನ್ನನ್ನು ನನ್ನ ವಾರ್ಡ್ನ ಮತದಾರ ಪ್ರಭುಗಳು ಗೆಲ್ಲಿಸಿದ್ದರು. ಆದರೆ ನಾನು ಎಂ.ಪಿ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಬೆಂಬಲಿಸಿದ ಕಾರಣ, ಕಾಂಗ್ರೆಸ್ ಪಟ್ಟಣ ಪಂಚಾಯ್ತಿಯ ಸದಸ್ಯರು ಬೆಂಬಲವನ್ನು ತೆಗೆದು ಕೊಂಡು ಈಗ ನಾನು ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾಗಿದ್ದೇನೆ. ಕೊಟ್ಟೂರಿನ ಅಭಿವೃದ್ಧಿಗಾಗಿ ಹಗಲು – ಇರಳು ಎನ್ನದೆ ಶ್ರಮಿಸುತೇನೆ ಎಂದು ಹೇಳಿದರು.ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಭ್ಯರ್ಥಿ ಆದ ಪ/ಜಾತಿ ಸಮುದಾಯದ ಬದ್ದಿ ರೇಖಾ ರಮೇಶ್ ರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು, ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು. ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಸದಸ್ಯರು ಬೆಂಬಲವನ್ನು ತೆಗೆದುಕೊಂಡು ಪಟ್ಟಣ ಪಂಚಾಯಿತಿ ಅಧಿಕಾರದ ಚುಕಾಣಿಯನ್ನು ಹಿಡಿದಿದ್ದಾರೆ‌‌. ಇನ್ನೂ ತೀವ್ರ ಕುತುಹಲಕ್ಕೆ ಕಾರಣರಾಗಿದ್ದ, ಉಪಾಧ್ಯಕ್ಷರ ಸ್ಥಾನಕ್ಕೆ , ಬಿಜೆಪಿ ಅಭ್ಯರ್ಥಿ ಸಿದ್ಧಯ್ಯ ರವರು ಆಯ್ಕೆಯಾಗಿದ್ದು, ಬಹಳ ಅಚ್ಚರಿಯ ಸಂಗತಿ ಎಂದರೆ ತಪ್ಪಾಗಲಾರದು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಹಾಲಿ ಕೆ.ಎಂ.ಎಫ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯ ಆಪ್ತರಾದ ಎಸ್ ಭೀಮ ನಾಯಕರವರು ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆಯಲ್ಲ. ಪಟ್ಟಣದ ಅಭಿವೃದ್ಧಿಗೆ ಪರಸ್ಪರ ಹಿತ ದೃಷ್ಟಿಯಿಂದ ಸಹಕಾರ ಮನೋಭಾವವಷ್ಟೇ. ಕೊಟ್ಟೂರಿನ ಅಭಿವೃದ್ಧಿಗಾಗಿ ಅವರು ತಮ್ಮ ಸಹಕಾರ ಮನೋಭಾವವನ್ನು ವ್ಯಕ್ತಪಡಿಸಿರುವರು ಎಂದು ಸಹ ಹೇಳಿದರು.

ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ -9, ಬಿಜೆಪಿ- 8 ಹಾಗು ಪಕ್ಷೇತರ -3 ಸದಸ್ಯರಿದ್ದಾರೆ. ಅಧಿಕಾರಕ್ಕೆ ಬರಲು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇಬ್ಬರು ಸದಸ್ಯರು ಹೊರ ಹೋಗಿದ್ದಾರೆ. ಈಗ ಪಕ್ಷೇತರ ಸದಸ್ಯೆ ಬದ್ದಿ ರೇಖಾ ರಮೇಶ್ ರವರು ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಬಿ ಸಿದ್ದಯ್ಯ ನಾಮಪತ್ರ ಸಲ್ಲಿಸಿದ್ದಾರೆ, ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಪಟ್ಟಣದ ಅಭಿವೃದ್ಧಿಗಾಗಿ ಪರಸ್ಪರ ಸಹಕಾರ ಮನೋಭಾವ ದಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಇದರಲ್ಲಿ ಹೊಂದಾಣಿಕೆ ಯಾಗಲಿ ಮೈತ್ರಿ ಆಗಲಿ ಎರಡು ಇಲ್ಲ ಕೇವಲ ಪರಸ್ಪರ ಸಹಕಾರ ಮನೋಭಾವವಷ್ಟೇ.ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯಲ್ಲಿ-20 ಒಟ್ಟು ಸದಸ್ಯರ ಪೈಕಿ- 16 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು‌. ನಾಲ್ವರು ಸದಸ್ಯರುಗಳು ಗೈರು ಹಾಜರಾಗಿದ್ದರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ. ಶಿವಯೋಗಿಯವರು, ಜಿಲ್ಲಾ ಗ್ಯಾರಂಟಿ ಅಧ್ಯಕ್ಷರಾದ ಶಿವಮೂರ್ತಿಯವರು, ಎಂ.ಎಂ.ಜೆ ಸತ್ಯಪ್ರಕಾಶ, ಕೊಟ್ಟೂರು ಬ್ಲಾಕ್ ಅಧ್ಯಕ್ಷರಾದ ದ್ವಾರಕೇಶರವರು, ಕಾಂಗ್ರೆಸ್ ಮುಖಂಡರಾದ ಮಲ್ಲನಾಯಕನಹಳ್ಳಿ ದೊಡ್ಡ ರಾಮಣ್ಣನವರು, ತಿಪ್ಪೇಸ್ವಾಮಿ ವೆಂಕಟೇಶ್ ರವರು ಹಾಗೂ ಅಡಿಕೆ ಮಂಜುನಾಥ್ ಹಗರಿಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋರಿ ಗೋಣಿಬಸಪ್ಪನವರು, ಕೊಟ್ಟೂರಿನ ಡಿ,ಎಸ್,ಎಸ್ ಮುಖಂಡರಾದ ಬಿ ದುರ್ಗೇಶ, ಬಿ ಮರಿಸ್ವಾಮಿ ಜಿಲ್ಲಾ ಸಂಚಾಲಕರು, ಟಿ ಹನುಮಂತಪ್ಪ ವಕೀಲರು, ಕೆಂಗರಾಜ ಪಟ್ಟಣ ಪಂಚಾಯತಿ ಸದಸ್ಯರು ಇತ್ತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button